ಚೆನ್ನೈ: ಪತ್ನಿ ಜೊತೆ ಶಾಂಪಿಂಗ್ಗೆ ತೆರಳುತ್ತಿದ್ದ ದಲಿತ ವ್ಯಕ್ತಿಯೊಬ್ಬರನ್ನು ಭಾನುವಾರ ಜನ ಸಂಚಾರವಿರುವ ನಡು ರಸ್ತೆಯಲ್ಲಿ ಎಳೆದಾಡಿ ಕೊಲೆ ಮಾಡಿದ್ದು, ಕೊಲೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
21 ವರ್ಷದ ದಲಿತ ಯುವಕ ಶಂಕರ್ ಮೇಲ್ಜಾತಿಯ ತನ್ನ ಪ್ರಿಯತಮೆಯ ಜೊತೆ ನಿನ್ನೆ ತಿರುಪ್ಪುರದ ಉಡುಮಲೈಪೆಟ್ಟೈಗೆ ಶಾಪಿಂಗ್ಗೆ ಹೋಗಿದ್ದರು. ಈ ವೇಳೆ ಬಂದ ಮೂವರು ಯುವಕನನ್ನ ಕೊಂದು ಯುವತಿಗೂ ನಡುರಸ್ತೆಯಲ್ಲಿ ಥಳಿಸಿ ಹಾಕಿದ್ದರು. ನಂತರ ಬೈಕ್ನಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಶಂಕರ್ ಪಾಲನಿ ಸಮುದಾಯಕ್ಕೆ ಸೇರಿ ಕೌಸಲ್ಯ ಅವರನ್ನು ಪ್ರೀತಿಸುತ್ತಿದ್ದರು. ಯುವತಿಯ ಮನೆಯವರು ಈ ಪ್ರೀತಿಗೆ ಅಡ್ಡಿ ಪಡಿಸಿದರೂ 8 ತಿಂಗಳ ಹಿಂz ಇವರಿಬ್ಬರು ವಿರೋಧದ ನಡುವೆಯೂ ಮದುವೆಯಾಗಿದ್ದರು.
ಕೊಲೆಯ ಬಗ್ಗೆ ಶಂಕರ್ ತಂದೆ ಪ್ರತಿಕ್ರಿಯಿಸಿದ್ದು, ಮಗ ಮೇಲ್ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ, ಆಕೆಯ ಪೋಷಕರ ಕಡೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧಾರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.