ದೆಹಲಿ: ಸಿಎಂ ಸಿದ್ದರಾಮಯ್ಯ ಅವರ ವಾಚ್ ವಿವಾದದಿಂದ ಸರಕಾರದ ಇಮೇಜಿಗೆ ಧಕ್ಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಿಳಿಸಿದ್ದಾರೆ.
ಅವರು ಇಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷೆ ಸೊನಿಯಾ ಗಾಂಧಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ವಾಚ್ ವಿವಾದದ ಕುರಿತು ಮಾತನಾಡಿದರು. ಬಳಿಕ ಎಸ್ ಎಂ ಕೃಷ್ಣ ಅಧಿಕಾರದಲ್ಲಿದ್ದ ವೇಳೆ ಬೆಂಗಳೂರಿನಲ್ಲಿ ಅಧಿವೇಶನ ನಡೆದಿದೆ. ಈಗಲೂ ಹೈಕಮಾಂಡ್ ಸೂಚಿಸಿದರೆ ಅಧಿವೇಶನ ನಡೆಸಲು ಸಿದ್ದ ಎಂದರು.
ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಇಂದು ಬೆಳಗ್ಗೆ 11.30ರವೇಳೆಗೆ ದೆಹಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಸೋನಿಯಾವರನ್ನು ಭೇಟಿಯಾಗಲಿರುವ ಪರಮೇಶ್ವರ್, ರಾಜ್ಯದಲ್ಲಿರುವ ಕಾಂಗ್ರೆಸ್ ಆಸ್ತಿ-ಪಾಸ್ತಿ ಬಗ್ಗೆ ವಿವರ ನೀಡಲಿದ್ದಾರೆ. ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳ ಆಸ್ತಿ ವಿವರ ಸಲ್ಲಿಸಲಿದ್ದಾರೆ.