ಕಾನ್ಪುರ: ಅಸ್ತಮಾ ರೋಗದಿಂದ ಬಳಲುತ್ತಿರುವ ತಮ್ಮ ತಂದೆ ಸರೋಜ್ ಮಿಶ್ರಾರ ಜೀವ ಉಳಿಸುವಂತೆ ಪ್ರಧಾನಿ ಮೋದಿಗೆ ಮಕ್ಕಳಿಬ್ಬರು ಪತ್ರದ ಮೂಲಕ ಮನವಿ ಮಾಡಿದ್ದು, ಮಕ್ಕಳಿಗೆ ಪಿಎಂಒ ನೆರವಿನ ಭರವಸೆ ನೀಡಿದೆ.
ಮಕ್ಕಳಿಬ್ಬರ ಮನವಿಗೆ ಸ್ಪಂದಿಸಿರುವ ಪಿಎಂಒ ನಿಮ್ಮ ತಂದೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸರೋಜ್ ಮಿಶ್ರಾರ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಸರೋಜ್ ಮಿಶ್ರಾ ಕಳೆದ ಎರಡು ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಬಡವರಾಗಿದ್ದ ಇವರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಅವರ ಇಬ್ಬರು ಮಕ್ಕಳಾದ ಸುಶಾಂತ್ ಮಿಶ್ರಾ ಮತ್ತು ತನ್ಮಯ್ ಮಿಶ್ರಾ ಪ್ರಧಾನಿ ಕಚೇರಿಗೆ ಸಹಾಯಕ್ಕಾಗಿ ಪತ್ರ ಬರೆದಿದ್ದರು.