ರಾಷ್ಟ್ರೀಯ

ಪರಿಹಾರ ನೀಡಿದ ಬಿಹಾರ, ಒಡಿಶಾ ಸಿಎಂಗೆ ಧನ್ಯವಾದ ಹೇಳಿದೆ ಜಯಾ

Pinterest LinkedIn Tumblr

jaya-6

ಚೆನ್ನೈ: ಕುಂಭದ್ರೋಣ ಮಳೆಯಿಂದ ಜಲಪ್ರಳಯಕ್ಕೆ ತುತ್ತಾಗಿರುವ ತಮಿಳುನಾಡಿಗೆ 5 ಕೋಟಿ ರುಪಾಯಿ ಪರಿಹಾರ ಘೋಷಿಸಿದ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಧನ್ಯವಾದ ಹೇಳಿದ್ದಾರೆ.

‘ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರುಪಾಯಿ ಪರಿಹಾರ ನೀಡಿ ಪತ್ರ ಬರೆದಿದ್ದಕ್ಕೆ ಧನ್ಯವಾದಗಳು’ ಎಂದು ಜಯಲಲಿತಾ ಪಟ್ನಾಯಕ್‌ಗೆ ಮರಳಿ ಪತ್ರ ಬರೆದಿದ್ದಾರೆ.

ಮಹಾಮಳೆಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ನೈಸರ್ಗಿಕ ವಿಪತ್ತಿನ ಪರಿಣಾಮವನ್ನು ತಗ್ಗಿಸಲು ನಮ್ಮ ಸರ್ಕಾರ ಸಾಕಷ್ಟು ಯತ್ನಿಸುತ್ತಿದೆ. ‘ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಮತ್ತು ಶುಭಾಶಯಗಳು’ ಎಂದು ಜಯಾ ಪತ್ರ ಬರೆದಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಜಯಲಲಿತಾ, ತಮ್ಮ ಕಾಳಜಿ ಮತ್ತು ಸಹಾಯ ‘ಮನ ತಲುಪಿತು’ ಎಂದು ಹೇಳಿದ್ದಾರೆ.

Write A Comment