ಮಂಡ್ಯ: ತಮಿಳುನಾಡು ರಾಜಧಾನಿ ಚೆನ್ನೈನ ಮಹಾಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಂಡ್ಯ ಮೂಲದ ಟೆಕ್ಕಿ ದಿಲೀಪ್ ಎಂಬುವರು ಕಣ್ಮರೆಯಾಗಿದ್ದಾರೆ.
ಚೆನ್ನೈನ ಮಣಿಪುರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಮಂಡ್ಯ ತಾಲೂಕಿನ ಎಂ ಹೊಸಹಳ್ಳಿ ಗ್ರಾಮದ ನಿವಾಸಿ.
ಕಳೆದ 2 ದಿನಗಳಿಂದ ದಿಲೀಪ್ ಪೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಕುಟುಂಬ ವರ್ಗದವರು ಇವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ದಿಲೀಪ್ ಸಂಪರ್ಕ ಸಿಗದಿರುವುದರಿಂದ ಕುಟುಂಬದಲ್ಲಿ ಆತಂಕ ಮೂಡಿದೆ.