ರಾಷ್ಟ್ರೀಯ

ಭಾರತ ಎಂದಿಗೂ ಸಹಿಷ್ಣು ರಾಷ್ಟ್ರವಾಗಿ ಉಳಿಯಲಿದೆ‌: ಜಾವೇದ್ ಅಖ್ತರ್

Pinterest LinkedIn Tumblr

javed-akhtar

ಮುಂಬೈ: ಭಾರತ ಯಾವಾಗಲೂ ಸಹಿಷ್ಣು ದೇಶವಾಗಿ ಉಳಿಯಲಿದೆ ಎಂದು ಬಾಲಿವುಡ್‌ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ.

‘ಸಮಾಜದ ಕೆಲ ವಿಭಾಗಗಳಲ್ಲಿ ಖಂಡಿತವಾಗಿಯೂ ಅಸಹಿಷ್ಣುತೆಯ ಕೆಲ ಉದಾಹರಣೆಗಳಿವೆ. ಆದರೆ, ಭಾರತ ಎಂದಿಗೂ ಸಹಿಷ್ಣು ದೇಶವಾಗಿ ಉಳಿಯಲಿದೆ. ನೀವು ಇಡೀ ರಾಷ್ಟ್ರವನ್ನು ಅಸಹಿಷ್ಣು ಎಂದು ಕರೆಯಲಾಗದು’ ಎಂದು ಪುಣೆಯಲ್ಲಿ ಶುಕ್ರವಾರ ನುಡಿದಿದ್ದಾರೆ.

‘ಅಸಹಿಷ್ಣುತೆ’ ಕುರಿತು ಬಾಲಿವುಡ್ ನಟ ಅಮೀರ್ ಖಾನ್ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ರಾಜಕೀಯ ಪಕ್ಷಗಳು ಸೇರಿದಂತೆ ಜನ ಸಾಮಾನ್ಯರೂ ಅಮೀರ್ ಅವರ ಹೇಳಿಕೆಗೆ ಪರ–ವಿರೋಧ ವ್ಯಕ್ತಪಡಿಸಿದ್ದರು.

Write A Comment