ರಾಷ್ಟ್ರೀಯ

ಜೋಧಪುರ್ ಜೈಲಿನಿಂದ ಸಿಎಂ ವಸುಂಧರಾ ರಾಜೇಗೆ ಜೀವ ಬೆದರಿಕೆ ಪತ್ರ: ಪೊಲೀಸ್

Pinterest LinkedIn Tumblr

vasuಜೋಧಪುರ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಮಾಧ್ಯಮಗಳಿಗೆ ಇತ್ತೀಚೆಗೆ ತಲುಪಿದ್ದ ಮುಖ್ಯಮಂತ್ರಿ ವಸುಂಧರಾ ರಾಜೇಯವರ ಜೀವ ಬೆದರಿಕೆ ಪತ್ರಕ್ಕೂ ಜೋಧಪುರ್ ಸೆಂಟ್ರಲ್‌ ಜೈಲಿಗೂ ಸಂಬಂಧವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜೇಯವರಿಗೆ ಬರೆದ ಜೀವ ಬೆದರಿಕೆ ಪತ್ರ ಜೋಧಪುರ್ ಸೆಂಟ್ರಲ್ ಜೈಲಿನಿಂದ ಪೋಸ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೀವ ಬೆದರಿಕೆ ಪತ್ರದ ಮಹತ್ವವನ್ನು ಅರಿತ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಜೈಲಿನ ಅಧಿಕಾರಿಗಳನ್ನು ತನಿಖೆಗೊಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಂಗಳವಾರದಂದು ಖಾಸಗಿ ಚಾನೆಲ್‌ಗೆ ಅನಾಮಧೇಯ ಪತ್ರವೊಂದು ತಲುಪಿದ್ದು, ಮುಖ್ಯಮಂತ್ರಿ ವಸುಂಧರಾ ರಾಜೇ ಬಾರ್ಮೇರ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆ ಮಾಡುವುದಾಗಿ ಪತ್ರದಲ್ಲಿ ಬರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Write A Comment