ರಾಷ್ಟ್ರೀಯ

ಗೆಲ್ಲುವವರೆಗೆ ಮದುವೆ ಆಗಲ್ಲ ಎಂದು ಶಪಥ ಮಾಡಿದ ಬಿಜೆಪಿ ಅಭ್ಯರ್ಥಿ !

Pinterest LinkedIn Tumblr

marrage

ಪಾಟ್ನಾ, ಸೆ.29: ಸಮಸ್ತಿಪುರ ಜಿಲ್ಲೆಯ ಸರಾಯಿರಂಜನ್ ವಿಧಾನಸಭಾ ಕೇಂದ್ರದಿಂದ ಜಯ ಸಾಧಿಸುವವರೆಗೂ ತಾನು ವಿವಾಹ ಬಂಧನಕ್ಕೆ ಒಳಗಾಗುವುದಿಲ್ಲ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂಜೀತ್ ನಿರ್ಗುಣಿ ಶಪಥ ಮಾಡಿದ್ದಾರೆ.

ತಮ್ಮ ಪ್ರತಿಸ್ಪರ್ಧಿ, ನಿತೀಶ್ ಕುಮಾರ್ ಸಂಪುಟದಲ್ಲಿ ನಂ.2 ಎಂದೇ ಗುರುತಿಸಿಕೊಂ‌ಡಿರುವ ಜೆಡಿಯು ಅಭ್ಯರ್ಥಿ ವಿಜಯ್ ಕುಮಾರ್ ಚೌಧರಿ ಅವರನ್ನು ಪರಾಭವಗೊಳಿಸಿ, ವಿಧಾನಸಭೆ ಪ್ರವೇಶಿಸಿದ ನಂತರವೇ ವಿವಾಹವಾಗುವುದಾಗಿ 30ರ ಹರೆಯದ ನಿರ್ಗುಣಿ ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ನಿರ್ಗುಣಿ, ಎರಡು ಬಾರಿ ನಾಗರಿಕ ಸೇವೆಗಳ ಪರೀಕ್ಷೆ ಅದಾದ ಬಳಿಕ, ದಿಢೀರನೆ ರಾಜಕೀಯಕ್ಕೆ ಪ್ರವೇಶ ಮಾಡಿ, ಸರ್ವ ಸಮಸ್ತಿಪುರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

2010ರಲ್ಲಿ ಸರಾಯಿರಂಜನ್‌ನಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ನಿರ್ಗುಣಿ, ಒಂದು ವರ್ಷದೊಳಗೆ ಜನಪ್ರಿಯತೆಗಳಿಸಿದರಲ್ಲದೆ, ಜನರ ಒತ್ತಾಯದ ಮೇರೆಗೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ, 6 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದರು.

ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆ ತರುವ ಸಂಬಂಧ ಏಷ್ಯಾದ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ, ಅಧ್ಯಾಯ ನಡೆಸಿರುವ ಅವರು, ಯೂನಿಸೆಫ್‌ನ ಕೆಲವು ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಗಳು ಹಾಗೂ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತದೊಂದಿಗೆ ಹೋರಾಟ ಮಾಡುತ್ತಿದ್ದಾರೆ.

Write A Comment