ಲಕ್ನೊ, ಆ.29: ರಾಜಸ್ತಾನದಲ್ಲಿ ನಿನ್ನೆ ಲಂಚ ಕೇಳಿದ ಪೊಲೀಸ್ವೊಬ್ಬರಿಗೆ ಸಾರ್ವಜನಿಕರು ಥಳಿಸಿದ್ದರು. ಅದರ ಬೆನ್ನಲ್ಲೇ ಉತ್ತರ ಪ್ರದೇಶದ ಲಕ್ನೋನಲ್ಲಿ ಲಂಚ ಕೇಳಿದರೆಂಬ ಕಾರಣಕ್ಕೆ ಪೋಲಿಸರೊಬ್ಬರಿಗೆ ಜನ ಸಖತ್ ಆಗಿ ಬೆಂಡೆತ್ತಿದ್ದಾರೆ.
ಹೊಟೇಲ್ವೊಂದರಲ್ಲಿ ಕಬಾಬ್ ಮತ್ತು ಪರೋಟಾ ತಿಂದ ಕೃಷ್ಣಕುಮಾರ್ ಎಂಬ ಪೊಲೀಸ್ ಪೇದೆ ದುಡ್ಡು ಕೊಡದೇ ಹಾಗೆಹೊರಟಿದ್ದಾನೆ. ಈ ವೇಳೆ ಅಂಗಡಿಯವ ಹಣ ನೀಡುವಂತೆ ಕೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪೇದೆ ಕೃಷ್ಣ, ಅಂಗಡಿಯವನನ್ನು ಬಾಯಿಗೆ ಬಂದಂತೆ ಬೈದು ಹೊಡೆದಿದ್ದಾನೆ.
ಇದನ್ನೆಲ್ಲಾ ನೋಡುತ್ತ ನಿಂತಿದ್ದ ಜನ, ಕ್ರಮೇಣ ಪೇದೆಯ ಸುತ್ತಲೂ ಬಂದುಸೇರಿದ್ದಾರೆ. ಬಳಿಕ ಪೇದೆಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಆದರೆ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಮನಕನಗರ ಪೊಲೀಸರು ತಿಳಿಸಿದ್ದಾರೆ.