ರಾಷ್ಟ್ರೀಯ

ಪ್ರಧಾನಿ ವಾರಾಣಸಿ ಭೇಟಿ ಮತ್ತೆ ರದ್ದು

Pinterest LinkedIn Tumblr

modi11ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಭೇಟಿ, ಮಳೆಯ ಕಾರಣಕ್ಕೆ ಎರಡನೇ ಬಾರಿ ರದ್ದಾಗಿದೆ.

ಒಂದು ದಿನದ ಭೇಟಿಗಾಗಿ ಪ್ರಧಾನಿ ಅವರ ಲೋಕಸಭೆ ಕ್ಷೇತ್ರ ವಾರಾಣಸಿಗೆ ಗುರುವಾರ ಆಗಮಿಸಬೇಕಿತ್ತು. ಮಳೆಯ ಕಾರಣಕ್ಕೆ ಜೂನ್‌ 28ರಂದು ಅವರ ಭೇಟಿ ರದ್ದಾಗಿತ್ತು.

‘ಪ್ರಧಾನಿ ಕಾರ್ಯಕ್ರಮಕ್ಕೆ ಈ ಬಾರಿ ಉತ್ತಮ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಾರ್ವಜನಿಕ ಸಭೆ ನಡೆಯಬೇಕಿದ್ದ ಇಲ್ಲಿನ ಡಿಎಲ್‌ಡಬ್ಲ್ಯೂ ಮೈದಾನದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಕ್ರಮ ರದ್ದು ಪಡಿಸಿದರು,’ ಎಂದು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್‌ ಬಾಜ್ಪೈ ಹೇಳಿದ್ದಾರೆ. ಜೂನ್‌ 28ರಂದು ಇದೇ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭೆ ಮಳೆಯಿಂದ ರದ್ದಾಗಿತ್ತು.

ವೇದಿಕೆ ಮೇಲೆ ಪುಷ್ಪಾಲಂಕಾರ ಮಾಡುತ್ತಿದ್ದ ದೇವನಾಥ್ (19), ಆಕಸ್ಮಿಕವಾಗಿ ವಿದ್ಯುತ್‌ ತಂತಿ ಸ್ಪರ್ಶಿಸಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದರು.

‘ಪ್ರಧಾನಿ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೈದಾನದಲ್ಲಿ ವಿಶೇಷವಾದ ಜಲನಿರೋಧಕ ಪೆಂಡಾಲ್‌ಗಳನ್ನು ನಿರ್ಮಿಸಲು ವಿದ್ಯುತ್‌ ನಿಗಮಕ್ಕೆ ಸೂಚಿಸಲಾಗಿತ್ತು. 25,000 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು,’ ಎಂದು ಬಿಜೆಪಿಯ ಸಂಜಯ್‌ ಭಾರದ್ವಾಜ್‌ ತಿಳಿಸಿದ್ದಾರೆ.

ಈ ಮೊದಲು, 2014 ಡಿಸೆಂಬರ್‌ 25ರಂದು ಪ್ರಧಾನಿ ವಾರಾಣಸಿಗೆ ಭೇಟಿ ನೀಡಿದ್ದರು.

Write A Comment