ಮನೋರಂಜನೆ

ಅಳಿಯನ ಸಾಲಕ್ಕೆ ನಾನು ಹೊಣೆಯಲ್ಲ: ರಜನಿಕಾಂತ್‌

Pinterest LinkedIn Tumblr

rajani

ಚೆನ್ನೈ (ಐಎಎನ್‌ಎಸ್‌): ಹಣಕಾಸು ವಿವಾದಕ್ಕೆ ಸಂಬಂಧಸಿದಂತೆ ತಮಿಳು ಚಿತ್ರ ನಟ ರಜನಿಕಾಂತ್‌ ಅವರು ತಮ್ಮ ಅಳಿಯ ಧನುಷ್‌ ಅವರ ತಂದೆ ಕಸ್ತೂರಿ ರಾಜಾ ಅವರ ಸಾಲಕ್ಕೆ ನಾನು ಜಾಮೀನುಗಾರ ಎಂದು ಮದ್ರಾಸ್‌ ಹೈಕೋರ್ಟ್‌ನಲ್ಲಿ ಲಿಖಿತ ಹೇಳಿಕೆ ದಾಖಲಿಸಿದ್ದಾರೆ.

ಕಸ್ತೂರಿ ರಾಜಾ ಅವರು ಫೈನಾನ್ಸಿಯರ್‌ ಒಬ್ಬರಿಂದ 65 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಒಂದು ವೇಳೆ ಈ ಸಾಲ ತೀರಿಸಲು ಸಾಧ್ಯವಾಗದಿದ್ದರೆ ಅದನ್ನು ರಜನಿಕಾಂತ್‌ ತೀರಿಸುತ್ತಾರೆ ಎಂದು ಕಸ್ತೂರಿ ರಾಜಾ ಅವರು ತಿಳಿಸಿದ್ದರು ಎಂದು ಫೈನಾನ್ಸಿಯರ್‌ ಆರೋಪಿಸಿದ್ದಾರೆ.

ಈ  ಪ್ರಕರಣ ಸಂಬಂಧ ರಜನಿಕಾಂತ್‌ ವಿರುದ್ಧ ಫೈನಾನ್ಸಿಯರ್‌ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು..

ಮದ್ರಾಸ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಕಳೆದ ಜೂನ್‌ 22ರಂದು ನ್ಯಾಯಾಲಯ ರಜನಿಕಾಂತ್‌ ಮತ್ತು ಕಸ್ತೂರಿ ರಾಜಾ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

‘ನಾನು ಆ ಸಾಲಕ್ಕೆ ಹೊಣೆಗಾರನಲ್ಲ. ನನಗೂ ಫೈನಾನ್ಸಿಯರ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ರಜನಿಕಾಂತ್‌ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ‘ಕಸ್ತೂರಿ ರಾಜಾ ಅವರು ಸಾಲ ಪಡೆಯುವಾಗ ನನ್ನ ಹೆಸರನ್ನು ಬಳಕೆ ಮಾಡಿದಾಗ ಫೈನಾನ್ಸಿಯರ್‌ ನನಗೆ ಯಾಕೆ ಮಾಹಿತಿ ನೀಡಲಿಲ್ಲ’ ಎಂದು ರಜನಿಕಾಂತ್‌ ಪ್ರಶ್ನಿಸಿದ್ದಾರೆ.

‘ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ’ ಎಂದು ರಜನಿಕಾಂತ್‌ ತಿಳಿಸಿದ್ದಾರೆ.

Write A Comment