ಹೈದರಾಬಾದ್: ಖಾಸಗಿ ವಾಹಿನಿಯೊಂದರ ನಿರೂಪಕಿಯೋರ್ವರು ತಮ್ಮ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮಾಧ್ಯಮಗಳ ಹಿಂದಿಟ್ಟುಕೊಂಡೇ ದಾಳಿ ನಡೆಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.
ಕೆಲ ಮಹಿಳಾ ಸಂಘಟನೆಗಳ ಸದಸ್ಯರು ಹಾಗೂ ಮಾಧ್ಯಮದವರೊಂದಿಗೆ ನೇರವಾಗಿ ತಮ್ಮ ಪತಿ ಅಕ್ರಮವಾಗಿ ನೆಲೆಸಿದ್ದ ಮನೆಗೆ ಭೇಟಿ ನೀಡಿದ ಮಹಿಳೆ, ಗಂಡನನ್ನು ಥಳಿಸಿ ಥಳಿಸಿಕೊಂಡಿದ್ದಾಳೆ.
ಯಾರೀ ಮಹಿಳೆ?
ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪದ್ಮಾವತಿ ಎಂಬಾಕೆಯೇ ಹೈಡ್ರಾಮಾ ಸೃಷ್ಟಿಸಿದ ಮಹಿಳೆಯಾಗಿದ್ದಾರೆ.
ಪ್ರಕರಣವೇನು?
ನೊಂದ ಪದ್ಮಾವತಿ ಸುಮಾರು 12 ವರ್ಷಗಳ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸತೀಶ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ದಂಪತಿಗಳು 10 ವರ್ಷಗಳ ಕಾಲ ಜೀವನವನ್ನೂ ಸಾಗಿಸಿದ್ದರು. ಬಳಿಕ ಇಬ್ಬರ ನಡುವೆ ಹಠಾತ್ತಾಗಿ ಬಿರುಕುಂಟಾಗಿದೆ.
ಪತಿ ಮ್ಯಾನೇಜರ್ ಆಗಿದ್ದ ಕಾರಣ ಬ್ಯುಸಿನೆಸ್ ಟೂರ್ ಅದು ಇದು ಎಂದು ನೆಪ ಹೇಳಿಕೊಂಡು ಮನೆಗೆ ಬರುವುದನ್ನೇ ಬಿಟ್ಟಿದ್ದ. ಇನ್ನು ಆಘಾಗ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದ ತನ್ನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, 10 ಲಕ್ಷ ವರದಕ್ಷಿಣೆ ತರುವಂತೆಯೂ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಇಂತಹ ಕೆಲ ಸಮಸ್ಯೆಗಳಿಂದ ದಾಂಪತ್ಯ ಜೀವನದಲ್ಲಿ ಅತಿಯಾದ ಬಿರುಕು ಕಾಣಿಸಿಕೊಂಡು ಕಳೆದ ಎರಡು ವರ್ಷಗಳಿಂದ ಈ ಇಬ್ಬರೂ ಪರಸ್ಪರ ದೂರವಾಗಿದ್ದಾರೆ. ಆದರೆ ನಿಧಾನಗತಿಯಲ್ಲಿ ತನ್ನ ಪತಿ ಬೇರೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ತಿಳಿದ ಪದ್ಮಾವತಿ, ಇಂದು ನೇರವಾಗಿ ಆತ ತಂಗಿದ್ದ ಮನೆಗೇ ಭೇಟಿ ನೀಡಿ ರಾದ್ಧಾಂತ ಸೃಷ್ಟಿಸಿದ್ದಾಳೆ.
ಈ ವೇಳೆ ತಮ್ಮ ಪತಿಯನ್ನು ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾಳೆ. ಇದಕ್ಕೆ ಕುಪಿತಗೊಂಡ ಪತಿ ಸತೀಶ್, ಆಕೆಯನ್ನು ಗಡುಸಾದ ಧ್ವನಿಯಲ್ಲಿ ಹೆದರಿಸಿದ್ದಾನೆ. ಆಗ ದಂಪತಿಗಳ ನಡುವೆ ವಾಗ್ವಾದ ನಡೆದು ರಂಪಾಟ ಆರಂಭವಾಗಿದೆ. ಬಳಿಕ ಎಚ್ಚೆತ್ತುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ 30 ತೊಲೆ ಬಂಗಾರ, ನಗದು ಕೊಟ್ಟಿದ್ದರೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಘಟನೆ ಬಳಿಕ ಆರೋಪಿ ಪತಿ ಸತೀಶ್, ಪರಾರಿಯಾಗಿದ್ದು, ಪೊಲೀಸರು ಸತೀಶ್ಗಾಗಿ ಶೋಧ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.