ಅಕ್ರಮ ಪ್ರವೇಶ ಮತ್ತು ನಿಯಮ ಬಾಹಿರವಾಗಿ ಮೀನುಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆ ಮಂಗಳವಾರ ಮುಂಜಾನೆ ಕಾಟ್ಚಾಠೇವು ಸಮೀಪದಲ್ಲಿ 15 ಮಂದಿ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಮವಾರ ಸಾಯಂಕಾಲ ಬೋಟ್ನಲ್ಲಿ ಮೀನುಗಾರರು ಮೀನುಗಾರಿಕೆಗಾಗಿ ತೆರಳಿದ್ದರು. ಮೀನುಗಳು ಬಹಳ ಕಡಿಮೆ ಪ್ರಮಾಣದಲ್ಲಿ ಸಿಕ್ಕಿರುವ ಕಾರಣ ಇನ್ನಷ್ಟು ಮೀನು ಹಿಡಿಯುವ ಆಸೆಯಿಂದ ಮುಂದಕ್ಕೆ ತೆರಳಿದ್ದು ಈ ಸಮಯದಲ್ಲಿ ಅರಿವಿಲ್ಲದಂತೆ ಸಮುದ್ರದ ಗಡಿ ದಾಟಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆ 15 ಮಂದಿ ಮೀನುಗಾರರನ್ನು ಹಾಗೂ ಮೂರು ಬೋಟ್ಗಳನ್ನು ವಶಕ್ಕೆ ಪಡೆದಿದ್ದು ಎಲ್ಲರ ಮೇಲೆಯೂ ಅಕ್ರಮ ಗಡಿ ಪ್ರವೇಶದ ಸಂಬಂಧ ಪ್ರಕರಣ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.