ನರ್ಹೇರಾ(ಉತ್ತರಪ್ರದೇಶ: ಪ್ರೀತಿಯನ್ನು ತಿರಸ್ಕಿರಿಸಿದ 16 ವರ್ಷ ವಯಸ್ಸಿನ ಬಾಲಕಿಯನ್ನು ಆರೋಪಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ವರದಿಯಾಗಿದೆ.
ಆರೋಪಿ 22 ವರ್ಷ ವಯಸ್ಸಿನ ಯೋಗೇಂದ್ರ 8ನೇ ತರಗತಿಯಲ್ಲಿ ಓದುತ್ತಿದ್ದ ಹಿಮಾಂಶಿ ಎನ್ನುವ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಪ್ರತಿನಿತ್ಯ ಕಾಡುತ್ತಿದ್ದ. ಆದರೆ, ಆತನ ಪ್ರೀತಿಗೆ ಬಾಲಕಿ ಸೊಪ್ಪು ಹಾಕಲಿಲ್ಲ ಎನ್ನಲಾಗಿದೆ.
ಆರೋಪಿ ಯುವಕ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರಿಂದ ಬಾಲಕಿ ಆತನೊಂದಿಗೆ ಕೆಲವು ಬಾರಿ ಮಾತನಾಡಿದ್ದಳು. ಆದರೆ, ಯುವಕ ಪ್ರೇಮದ ಪ್ರಸ್ತಾಪವಿಟ್ಟಾಗ ಆಕೆ ಅದನ್ನು ತಿರಸ್ಕರಿಸಿ ಮನೆಯಲ್ಲಿ ಆತನ ಬಗ್ಗೆ ದೂರು ನೀಡಿದ್ದಳು ಎಂದು ಬಾಲಕಿಯ ಅಜ್ಜ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾನೆ.
ಬಾಲಕಿಯ ಕುಟುಂಬದವರು ಯೋಗೇಂದ್ರ ಪೋಷಕರನ್ನು ಭೇಟಿ ಮಾಡಿ ಮಗನಿಗೆ ಬುದ್ದಿಹೇಳುವಂತೆ ಮನವಿ ಮಾಡಿದ್ದರು. ಇದರಿಂದ ಕೋಪಗೊಂಡ ಯುವಕ ಯೋಗೇಂದ್ರ ಬಾಲಕಿಯನ್ನು ಗುಂಡಿಟ್ಟು ಹತ್ಯೆ ಮಾಡಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ.
ಆರೋಪಿಯ ವಿರುದ್ಧ ಹತ್ಯಾ ಪ್ರಕರಣ ದಾಖಲಿಸಲಾಗಿದ್ದು ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ತಾನು ಹಿಮಾಂಶುಳನ್ನು ಪ್ರೀತಿಸುತ್ತಿದ್ದು, ಆಕೆ ಪ್ರೀತಿಯನ್ನು ತಿರಸ್ಕರಿಸಿದ್ದಲ್ಲದೇ ತಂದೆ ತಾಯಿಗೆ ದೂರು ನೀಡಿದ್ದರಿಂದ ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಯೋಗೇಂದ್ರ ತಿಳಿಸಿದ್ದಾನೆ.