ರಾಷ್ಟ್ರೀಯ

ವರದಕ್ಷಿಣೆ ಕಾನೂನಿಗೆ ತಿದ್ದುಪಡಿ?; ಮಳೀಮಠ್‌ ಆಯೋಗದ ಶಿಫಾರಸು

Pinterest LinkedIn Tumblr

DOWRYwebನವದೆಹಲಿ(ಪಿಟಿಐ): ವರದಕ್ಷಿಣೆ  ಕಿರುಕುಳ ಕಾನೂನು ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಸರ್ಕಾರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 498ಎ (ವರದಕ್ಷಿಣೆ ಬೇಡಿಕೆ, ಪತಿ ಹಾಗೂ ಆತನ ಪೋಷಕರಿಂದ ಆಗುವ ಕಿರುಕುಳ ತಡೆ)ಗೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ.

ಪ್ರತಿ ವರ್ಷ ದೇಶದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 10 ಸಾವಿರ ನಕಲಿ ಪ್ರಕರಣಗಳು ದಾಖಲಾಗುತ್ತಿವೆ. ಸೆಕ್ಷನ್‌ 498ರA ಅಡಿ ಪ್ರಕರಣ ದಾಖಲಾದ ಕೂಡಲೇ ಪತಿ ಹಾಗೂ ಅವರ ಮನೆಯವರನ್ನು ಬಂಧಿಸಬಹುದು. ಈ ಪ್ರಕರಣದಲ್ಲಿ ಜಾಮೀನು ಸಿಗುವುದಿಲ್ಲ.

ಇದರ ಬದಲು ‘ರಾಜಿ’  ಮೂಲಕ ಪ್ರಕರಣ ಇತ್ಯರ್ಥಪಡಿಸಲು ಅವಕಾಶ ಇರುವಂತೆ ಕಾನೂನಿಗೆ ತಿದ್ದುಪಡಿ ತರಲು ನ್ಯಾಯಮೂರ್ತಿ ಮಳೀಮಠ್‌ ಆಯೋಗ ನೀಡಿದ ಶಿಫಾರಸನ್ನು ಸರ್ಕಾರ ಪರಿಶೀಲಿಸುತ್ತಿದೆ.

ಕಾನೂನು ತಿದ್ದಪಡಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಕೇಂದ್ರ ಸಚಿವ ಸಂಪುಟಕ್ಕೆ ಕರಡು ಪ್ರತಿ ರವಾನಿಸಿದೆ.

Write A Comment