ರಾಷ್ಟ್ರೀಯ

ಮೆಮೊರಿ ಕಾರ್ಡ್ ಗಾಗಿ ತಂದೆಯನ್ನೇ ಹತ್ಯೆಗೈದ ಸುಪುತ್ರ

Pinterest LinkedIn Tumblr

murder

ತೆಲಂಗಾಣ: ಕಂಠ ಪೂರ್ತಿ ಕುಡಿದು ಮಗ ಕ್ಷುಲಕ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಘಟನೆ ತೆಲಂಗಾಣದ ಮೆಹಬೂಬ್ ನಗರ್ ಜಿಲ್ಲೆಯಲ್ಲಿ ನಡೆದಿದೆ.

ವಿಪಂಗಾಂಡಲಾ ಗ್ರಾಮದಲ್ಲಿ ವಾಸವಾಗಿರುವ ಜಿ.ರಾಜು ಎಂಬಾತ ಕಂಠ ಪೂರ್ತಿ ಕುಡಿದು ಬಂದಿದ್ದ. ಅಲ್ಲದೇ ಈ ಸಮಯದಲ್ಲಿ ತಾನು ಕಳೆದುಕೊಂಡಿದ್ದ ಮೊಬೈಲ್ ಫೋನ್‌ ಮೆಮೋರಿ ಕಾರ್ಡ್ ಹುಡುಕಿದ್ದು ಸಿಗಲಿಲ್ಲ ಎನ್ನಲಾಗಿದೆ. ಹಾಗಾಗಿ ಅಲ್ಲಿಯೇ ಇದ್ದ ತಂದೆಯ ಬಳಿ ಮೆಮೊರಿ ಕಾರ್ಡ್ ಬಗೆಗೆ ಕೇಳಿದ್ದಾನೆ. ಆದರೆ ತಂದೆ ಜಿ.ಹನಮಂತು ತನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ. ಇದೇ ಕಾರಣಕ್ಕೆ ತಂದೆ ಮಗನ ನಡುವೆ ಜಗಳ ನಡೆದಿದ್ದು ಸ್ವಲ್ಪ ಸಮಯದ ನಂತರ ಪುತ್ರ ಹೋಗಿ ಮಲಗಿದ್ದಾನೆ.

ನಂತರ ಮನೆಯಲ್ಲಿ ಎಲ್ಲರೂ ಮಲಗಿದ್ದು ಇದೇ ಸಮಯದಲ್ಲಿ ಮತ್ತೆ ಎದ್ದ ರಾಜು ಬಡಿಗೆ ಮತ್ತು ಕಲ್ಲಿನಿಂದ ತಂದೆ ಹನುಮಂತನ ತಲೆಗೆ ಹೊಡೆದು ಕೊಂದು ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಪಾತಕ ಪುತ್ರನ ಪತ್ತೆಗೆ ಮುಂದಾಗಿದ್ದಾರೆ ಎಂಬ ಎಂದು ಮೂಲಗಳು ತಿಳಿಸಿವೆ.

Write A Comment