ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮ ಸುರಿಯುತ್ತಿದ್ದು ರಸ್ತೆ ಮತ್ತು ವಾಯು ಸಂಚಾರ ಅಸ್ತವ್ಯಸ್ತ ಗೊಂಡಿದೆ. ಹಿಮಪಾತ ಮತ್ತು ಮಳೆ ಮಂಗಳವಾರವೂ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬನಿಹಾಲ್ ಸೆಕ್ಟರ್ನಲ್ಲಿ ಭಾರಿ ಹಿಮಪಾತ ಮತ್ತು ರಾಮ್ಬನ್ ಸೆಕ್ಟರ್ನಲ್ಲಿ ಭೂ ಕುಸಿತದಿಂದಾಗಿ ಜಮ್ಮು– ಶ್ರೀನಗರ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ರನ್ವೇಯಲ್ಲಿ ಹಿಮಪಾತ ಮತ್ತು ಬೆಳಕಿನ ಕೊರತೆಯಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲ ವಿಮಾನಗಳನ್ನು ರದ್ದುಪಡಿಸಲಾ ಗಿದೆ. ಕನಿಷ್ಠ ಎಂದರೆ –3.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಗುಲ್ಮಾರ್ಗ್ನಲ್ಲಿ ದಾಖಲಾಗಿದೆ.