ರಾಷ್ಟ್ರೀಯ

ಬಿಜೆಪಿಯಿಂದ ಗೆದ್ದ ಮೂವರು; ಜಗದೀಶ್ ಪ್ರಧಾನ್ ವಿಜಯೇಂದ್ರ ಕುಮಾರ, ಓಂ ಪ್ರಕಾಶ್ ಶರ್ಮಾ

Pinterest LinkedIn Tumblr

bjp-winners

ಜಗದೀಶ್ ಪ್ರಧಾನ್ ,     ವಿಜಯೇಂದ್ರ ಕುಮಾರ,          ಓಂ ಪ್ರಕಾಶ್ ಶರ್ಮಾ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಎಎಪಿ ‘ಸುನಾಮಿ ಅಲೆ’ಯಲ್ಲೂ ತೇಲಿ ದಡ ಸೇರಲು ಸಾಧ್ಯವಾಗಿದ್ದು ಬಿಜೆಪಿಯ ಮೂರು ಅಭ್ಯರ್ಥಿಗಳಿಗೆ ಮಾತ್ರ. ಜತೆಗೆ ಚುನಾವಣೆಗೂ ಮುನ್ನವಷ್ಟೇ ಪಕ್ಷ ಸೇರಿ ಸೋಲು ಕಂಡವರಲ್ಲಿ ಇಬ್ಬರು ಪ್ರಮುಖರು. ಒಬ್ಬರು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಮತ್ತೊಬ್ಬರು ಕೇಂದ್ರ ಮಾಜಿ ಸಚಿವೆ ಕೃಷ್ಣಾ ತೀರಥ್.

ಬೇಡಿ ಅವರು 2277 ಮತಗಳ ಅಂತರದಿಂದ ಎಎಪಿ ಅಭ್ಯರ್ಥಿ ಎಸ್.ಕೆ.ಬಗ್ಗಾ ವಿರುದ್ಧ ಸೋಲು ಕಂಡಿದ್ದಾರೆ. ಕೃಷ್ಣಾ ತೀರಥ್ ಅವರು 34638 ಮತಗಳ ಅಂತರದಿಂದ ಎಎಪಿಯ ಹಜಾರಿ ಲಾಲ್ ಚೌಹಾಣ್ ಎದುರು ಸೋಲು ಕಂಡಿದ್ದಾರೆ.

Write A Comment