ಗಲ್ಫ್

ಉದ್ಯಮಿ ದಿನೇಶ್ ಚಂದ್ರಶೇಖರ್ ದೇವಾಡಿಗ ಮಡಿಲಿಗೆ ‘ಆರ್ಯಭಟ ಇಂಟೆರ್ ನ್ಯಾಷನಲ್ ಅವಾರ್ಡ್’

Pinterest LinkedIn Tumblr

ದುಬೈ: ದುಬೈಯ ಉದ್ಯಮಿ ದಿನೇಶ್ ಚಂದ್ರಶೇಖರ್ ದೇವಾಡಿಗ ಅವರು ಈ ಬಾರಿಯ ಪ್ರತಿಷ್ಠಿತ ‘ಆರ್ಯಭಟ ಇಂಟೆರ್ ನ್ಯಾಷನಲ್ ಅವಾರ್ಡ್’ಗೆ ಭಾಜನರಾಗಿದ್ದಾರೆ.

ದಿನೇಶ್ ಚಂದ್ರಶೇಖರ್ ದೇವಾಡಿಗ ಅವರ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದುಬೈಯ ಕದಮ್ (ಕುಂದಾಪುರ ದೇವಾಡಿಗ ಮಿತ್ರ) ಸಂಘಟನೆಯ ಸಂಸ್ಥಾಪಕರಲ್ಲೊಬ್ಬರಾದ ದಿನೇಶ್ ಚಂದ್ರಶೇಖರ್ ದೇವಾಡಿಗ ಅವರು ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

ದಿನೇಶ್ ಚಂದ್ರಶೇಖರ್ ಅವರಿಗೆ ಪತ್ನಿ ವಿಶಾಲಾಕ್ಷಿ ಹಾಗು ಇಬ್ಬರು ಮಕ್ಕಳಿದ್ದು, ದುಬೈಯ Elegant Kitchen Equipment Trading LLC ಕಂಪನಿಯ ಮಾಲಕರಾಗಿದ್ದಾರೆ.

ಮೇ ತಿಂಗಳ 23 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Comments are closed.