ಗಲ್ಫ್

ಶಾರ್ಜ : ಕೆ.ಸಿ.ಎಫ್ ನಿಂದ ಯುಎಇ ರಾಷ್ಟ್ರೀಯ ದಿನಾಚರಣೆ, ಮೆಹ್ಫಿಲೇ ಮುಸ್ತಫಾ ಕಾರ್ಯಕ್ರಮ; ಪ್ರವಾದಿ ಮುಹಮ್ಮದ್ (ಸ.) ಕರುಣೆಯ ಆಗರ: ಎ.ಪಿ. ಉಸ್ತಾದ್

Pinterest LinkedIn Tumblr

ಪ್ರವಾದಿ ಮುಹಮ್ಮದ್(ಸ.) ವಿಶ್ವ ಕಂಡ ಅಪ್ರತಿಮ ಜನನಾಯಕರಾಗಿದ್ದು, ಅವರು ಕಾರುಣ್ಯದ ಸಾಕಾರ ಮೂರ್ತಿ. ವಿಶ್ವ ಶಾಂತಿಗಾಗಿ ಅವರು ಅನುಸರಿಸಿದ ಮಾರ್ಗ ಎಲ್ಲರಿಗೂ ಮಾದರಿ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಶಾರ್ಜ ವಲಯದ ವತಿಯಿಂದ ಇಲ್ಲಿನ ಇಬ್ನ್ ಸೀನಾ ಇಂಗ್ಲಿಷ್ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಯು.ಎ.ಇಯ 46ನೇ ರಾಷ್ಟ್ರೀಯ ದಿನಾಚರಣೆ ಹಾಗೂ ಮೆಹ್ಫಿಲೇ ಮುಸ್ತಫಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಃಅದಿನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಸ್ಸೆಯ್ಯದ್ ಖಲೀಲುಲ್ ಬುಖಾರಿ ತಂಙಳ್ ದುಅಗ್ಯೆದು ಸಾಂದರ್ಭಿಕವಾಗಿ ಮಾತನಾಡಿದರು. ಹಾಶಿಂ ರಿಹಾನ್ ತೆಕ್ಕರ್ ಶಾರ್ಜ ಹಾಗೂ ಮಹಮ್ಮದ್ ಹಾದಿ ಯು.ಎ.ಇ ರಾಷ್ಟ್ರಗೀತೆ ಹಾಡಿದರು.

ಮರ್ಕಝ್ ವಿದ್ಯಾ ಸಂಸ್ಥೆಯ ಉಪಕುಲಪತಿ ಡಾ.ಹುಸ್ಯೆನ್ ಸಖಾಫಿ ಚುಲ್ಲಿಕ್ಕೋಡ್ ಕಾರ್ಯಕ್ರಮ ಉದ್ಘಾಟಿಸಿದರು. ಪೆರೋಡ್ ಮಹಮ್ಮದ್ ಅಝ್ಹರಿ ಮುಖ್ಯ ಭಾಷಣ ಮಾಡಿದರು. ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮಹಮ್ಮದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಹಮ್ಮದಲಿ ಸಖಾಫಿ, ಶ್ಯೆಕ್ ಮಹಮ್ಮದ್ ಎ.ಮಜೀದ್ ಅಹ್ಮದ್ ಅಲ್ ಮುಅಲ್ಲಾ, ಅಹ್ಮದ್ ಅಲ್ ಮುಹ್ಯೆರಿ, ಸ್ಯೆಯದ್ ಹಫೀಝಲ್ಲಾ, ಇಕ್ಬಾಲ್ ಮಂಗಳೂರು ಉಪಸ್ಥಿತರಿದ್ದರು. ಪ್ರತಿಭೋತ್ಸವ ಹಾಗೂ ಅಸ್ಸುಫಾ ಪರೀಕ್ಷೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಅಲ್ ಇಹ್ಸಾನ್ ಕಾರ್ಯಕ್ರಮದ ಕುರಿತು ಸಾಕ್ಷ್ಯ ಚಿತ್ರವನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು. ಕೆ.ಸಿ.ಎಫ್ ಶಾರ್ಜ ವಲಯ ಅಧ್ಯಕ್ಷ ಅಬೂಸ್ವಾಲಿಹ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಜಬ್ ಮಹಮ್ಮದ್ ಉಚ್ಚಿಲಾ ಸ್ವಾಗತಿಸಿದರು. ಮೀಲಾದ್ ಕಾರ್ಯಕ್ರಮದ ಸಂಚಾಲಕ. ಹುಸ್ಯೆನ್ ಇನೋಳಿ ವಂದಿಸಿದರು.

Comments are closed.