ಗಲ್ಫ್

ಡಿ 1ರಂದು ದುಬೈಯಲ್ಲಿ ಕರ್ನಾಟಕ ಎಸ್ ಕೆ ಎಸ್ ಎಸ್ ಎಫ್ ದುಬೈ ಸಮಿತಿ ವತಿಯಿಂದ ಜಂಟೀ ಬೃಹತ್ ಮೀಲಾದ್ ಸಮಾವೇಶ

Pinterest LinkedIn Tumblr

ಲೋಕ ಪ್ರವಾದಿ ಮುಹಮ್ಮದ್ (ಸ ಅ) ರವರ 1492 ನೇ ಜನ್ಮ ದಿನಾಚರಣೆಯ ಅಂಗವಾಗಿ ಹಾಗೂ ಯು ಎ ಇ 46ನೇ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಅನಿವಾಸಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಯಾದ ಕರ್ನಾಟಕ ಎಸ್ ಕೆ ಎಸ್ ಎಸ್ ಎಫ್ ದುಬೈ ಸಮಿತಿಯು ಬ್ರಹತ್ ಮೀಲಾದ್ ಸಮಾವೇಶವನ್ನು , ಯು ಎ ಇ ರಾಷ್ಟ್ರೀಯ ದಿನಾಚರಣೆ ಡಿಸೆಂಬರ್ 01 ರಂದು ಶುಕ್ರವಾರ ಸಂಜೆ 5.30 ಕ್ಕೆ ಸರಿಯಾಗಿ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ದುಬೈ ಸಮಿತಿ ಅಧ್ಯಕ್ಷರು ಆಶಿಕ್ ಇ ರಸೂಲ್ ಬೃಹತ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಸಯ್ಯದ್ ಅಸ್ಕರಲಿ ತಂಙಲ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಹಕೀಮ್ ತಂಙಲ್ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದು ಇರ್ಷಾದ್ ದಾರಿಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಭಾಷಣ ಲೋಕದ ದ್ರುವತಾರೆ, ಹಲವಾರು ವೇದಿಕೆಗಳಲ್ಲಿ ತನ್ನ ವಾಕ್ಷಾತುರ್ಯದ ಮೂಲಕ ಯುವ ಸಮೂಹಗಳನ್ನೇ ತನ್ನತ್ತ ಸೆಳೆದ ಆವೇಶ ಧ್ವನಿ ಯುವ ಪ್ರಭಾಷಕ ಬಹು ಉಸ್ತಾದ್ ಹನೀಫ್ ಹುದವಿ ಅಡ್ವಕೇಟ್ ದೇಲಂಪಾಡಿ ರವರು ಮುಖ್ಯ ಪ್ರಭಾಷಣೆಗೈಯಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ ಖಾದರ್ ಫೈಝಿ (ಅಧ್ಯಕ್ಷರು ಸುನ್ನಿ ಸೆಂಟರ್ ದುಬೈ), ಜನಾಬ್ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ , ಜನಾಬ್ ಅಬ್ದುಲ್ ಖಾದರ್ ಬೈತಡ್ಕ , ಜನಾಬ್ ಷರೀಫ್ ಕಾವು, ಜನಾಬ್ ಅಶ್ರಫ್ ಷಾ ಮಾಂತೂರ್, ಜನಾಬ್ ಅಲ್ತಾಫ್ ಫರಂಗಿಪೇಟೆ ಮೊದಲಾದವರನ್ನೊಳಗೊಂಡು ವಿವಿಧ ಕ್ಷೇತ್ರಗಳ ಗಣ್ಯರ ಹಲವಾರು ಸಾಮಾಜಿಕ, ಧಾರ್ಮಿಕ ಉಲಮಾ ಉಮಾರಾ ನೇತಾರರು,ಬಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪುಟಾಣಿಗಳಿಗೆ ನಬಿ ಮದ್ಹ್ ಗಾನ , ಭಾಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಳಾದ ದಫ್ಫ್ ಪ್ರದರ್ಶನ , ಬುರ್ಧಾ ಆಲಾಪನೆ ನಡೆಯಲಿದೆ. ಅಲ್ಲದೆ ಮಗ್ರಿಬ್ ನಮಾಜ್ಹಿನ ಬಳಿಕ ಉಲಮಾ ಉಮರಾ ನೇತಾರರಿಂದ ಮೌಲೂದ್ ಪಾರಾಯಣ ನಡೆಯಲಿದ್ದು ಅನಿವಾಸಿ ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ , ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೆ ಐ ಸಿ , ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ , ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ತೋಡಾರ್ ಸಮಿತಿಗಳ ನೇತಾರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.