ದುಬೈ :ಯಕ್ಷ ಮಿತ್ರರು ದುಬಾಯಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ, ವಸ್ತ್ರಾಲಂಕರ ತರಬೇತಿ ಕಾರ್ಯಗಾರ ಕಳೆದ ಶುಕ್ರವಾರ ದುಬಾಯಿಯ ಅಲುಕುಸ್ ನ ವುಡ್ ಶೈನ್ ನಲ್ಲಿ ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮದ ಉದ್ಘಟನೆಯನು ಯಕ್ಷಮಿತ್ರರು ದುಬಾಯಿಯ ಸಂಚಾಲಕರಾದ ಚಿದನಂದ ಪೂಜಾರಿ,ದಿನೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಬದಲ್ಲಿ ಮುಖ್ಯ ಅಥಿತಿಯಾಗಿ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಕೇರಳ ಸರಕಾರ ಇದರ ಅದ್ಯಕ್ಷರೂ ಎಡನೀರು ಮೇಳದ ಸಂಚಲಕಾರದ ಜಯರಾಮ ಮಂಜಿತಾಯ ಉಪಸ್ತಿತರಿದ್ದರು.ಯಕ್ಷಮಿತ್ರರು ದುಬಾಯಿಯ 12 ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆ -ಯಕ್ಷಗಾನದ ಬೆಳವಣಿಗೆಗಾಗಿ ಹಮ್ಮಿಕೊಂಡ ವಿವಿಧ ತರಬೇತಿ ಶಿಬಿರಗಳನ್ನು ಶ್ಲಾಘಿಸಿದರು.
ಲಕ್ಷ್ಮಿಶ ಶರ್ಮ,ವಾಸು ಬಾಯಾರ್,ಜಯರಾಮ್ ಎಡನೀರು ಶ್ರೀಯುತ ಜಯರಾಮ್ ಮಂಜಿತಾಯವರನ್ನು ಪರಿಚಯಿಸಿದರು.ತಂಡದ ಸಂಚಾಲಕರಾದ ದಿನೇಶ್ ಶೆಟ್ಟಿ, ಲಕ್ಷ್ಮಿಶ ಶರ್ಮ ಮಧೂರುರವರು ಶ್ರೀಯುತರನ್ನು ಸನ್ಮಾನಿಸಿದರು.
ಸುಮಾರು ಮೂವತ್ತಕ್ಕೂ ಮಿಕ್ಕಿ ಸೇರಿದ ಶಿಬಿರಾರ್ಥಿಗಳಲ್ಲಿ ಬಹುಪಾಲು ಮಕ್ಕಳು ಮತ್ತು ಮಹಿಳೆಯರೇ ಇದ್ದರೆಂಬುದು ಗಮನಾರ್ಹ.ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಬಾಗವಹಿಸಿ ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಸಿಕೊಂಡು ಆನಂದಿಸಿದರು.ಎಲ್ಲರಿಗೂ ಅಥಿತಿಗಳು ಪ್ರಾಮಾಣ ಪತ್ತ ನೀಡಿ ಅಭಿನಂದಿಸಿದರು.ತರಭೇತಿ ಶಿಬಿರದ ನಿರ್ದೇಶಕರಾದ ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಇವರನ್ನು ಜಯರಾಮ ಎಡನೀರು ಪುರಸ್ಕರಿಸಿ ಅಭಿನಂದಿಸಿದರು. ಗಮ್ಮತ್ ಕಲಾವಿದೆರ್ ದುಬಾಯಿಯ ವಾಸು ಶೆಟ್ಟಿ,ಮಾದ್ಯಮ ಪ್ರತಿನಿಧಿ ರಮೇಶ್ ಸುವರ್ಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗಿರೀಶ್ ನಾರಯಣ್,ಬಾಲಕೃಷ್ಣ ಡಿ ಶೆಟ್ಟಿಗಾರ್, ಸುಮಂತ್ ಹೆಗ್ಡೆ,ಸ್ವಾತಿ ಶರತ್ ಅಚಾರ್,ದೀನೇಶ್ ಬಿಜೈ,ಚಂದ್ರ ಮೋಹನ್,ವಿಕ್ರಮ್ ಶೆಟ್ಟಿ ಕಡಂದಲೆ,ಮೊದಲಾದವರು ಉಪಸ್ತಿತರಿದ್ದರು.