ವರದಿ: ಬಿ. ಕೆ. ಗಣೇಶ್ ರೈ ಯುಎಇ
ಫೋಟೋ: ಅಶೋಕ್ ಬೆಳ್ಮಣ್
ಯು.ಎ.ಇ. ಬಂಟ್ಸ್ ಆಶ್ರಯದಲ್ಲಿ 41ನೇ ಸ್ನೇಹ ಮಿಲನ 2015 ಏಪ್ರಿಲ್ 24 ರಂದು ದುಬಾಯಿಯ ಜೆ. ಡಬ್ಲ್ಯೂ ಮೇರಿಯೆಟ್ ಹೋಟೆಲ್ ಸಭಾಂಗಣದಲ್ಲಿ ಮನಸೆಳೆದ ಅದ್ದೂರಿ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಯು.ಎ.ಇ. ಯ ವಿವಿಧ ಭಾಗಗಳಿಂದ ಆಗಮಿಸಿದ ಬಂಟಭಾಂದವರು ಸಾಕ್ಷಿಯಾದರು.
ಮುಖ್ಯ ಅತಿಥಿಗಳನ್ನು ಗೌರವಪೂರ್ವಕವಾಗಿ ಕೇರಳದ ಚೆಂಡೆ, ಪೂರ್ಣಕುಂಭ ಕಳಸದೊಂದಿಗೆ ಸುಮಂಗಲೆಯರು ಸಭಾಂಗಣಕ್ಕೆ ಬರಮಾಡಿಕೊಂಡರು.
ಡಾ| ಬಿ. ಆರ್ ಶೆಟ್ಟಿಯವರು ಮತ್ತು ಡಾ. ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು 41ನೇ ಸ್ನೇಹ ಮಿಲನ ಉದ್ಘಾಟನೆ
ಯು.ಎ.ಇ. ಬುಂಟ್ಸ್ ಮಹಾಪೋಷಕರಾದ ಡಾ| ಬಿ. ಆರ್ ಶೆಟ್ಟಿಯವರು ಮತ್ತು ಡಾ| ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು 41ನೇ ಸ್ನೇಹ ಮಿಲನವನ್ನು ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಮತ್ತು ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ ಉದ್ಘಾಟಿಸಿದರು.
ಶ್ರೀಮತಿ ಸಂಗೀತ ಶೆಟ್ಟಿಯರಿಂದ ಸ್ವಾಗತ ಗೀತೆ, ಸನ್ನಿಧಿ ಮತ್ತು ತಂಡದವರಿಂದ ಗಣಪತಿ ನೃತ್ಯ, ಶ್ರೀಮತಿ ಶರ್ಮಿಳಾ ರಂಜಿತ್ ರೈ ಸರ್ವರನ್ನು ಸ್ವಾಗತಿಸಿದರು.
ಸಮಾರಂಭದಲ್ಲಿ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಅರಬ್ ಉಡುಪಿ ಹೊಟೇಲ್ನ ಶೇಖರ್ ಶೆಟ್ಟಿ, ಕಾರ್ಯಕ್ರಮದ ರೂವಾರಿ ಸರ್ವೋತಮ ಶೆಟ್ಟಿ, ಯುಎಇ ಎಕ್ಸ್ಚೇಂಜ್ನ ಸುಧೀರ್ ಕುಮಾರ್ ಶೆಟ್ಟಿ, ಗುಣಶೀಲ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಬುಧಾಬಿ ಜೂನಿಯರ್ಸ್ ಚೈತ್ರ, ಸುಪ್ರಿಯಾ, ಅನಿಷಾ ತಂಡದವರಿಂದ ನೃತ್ಯ, ದುಬಾಯಿಯ ಸ್ಮೈಲ್ ಕ್ರಿಯೇಶನ್ ತಂಡದವರಿಂದ ನೃತ್ಯ.
ಮನಸೆಳೆದ ಮಕ್ಕಳ ನೃತ್ಯ ಸ್ಪರ್ದೆ.
ಪ್ರಥಮ ಸ್ಥಾನ : ಅನುಪಮ ಮತ್ತು ತಂಡ – ಅಬುಧಾಬಿ
ದ್ವಿತೀಯ ಸ್ಥಾನ : ಅಮಿಶಾ ಮತ್ತು ತಂಡ – ದುಬಾಯಿ
ಶ್ರೀ ಸರ್ವೊತ್ತಮ ಶೆಟ್ಟಿಯವರು 2014-15 ನೇ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಸರ್ವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ನೂತನ ಕಾರ್ಯಕಾರಿ ಸಮಿತಿಯ ರಚನೆ 2015-16 ನೇ ಸಾಲಿನ ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ತನಿಷಾ ಮತ್ತು ಆದಿತ್ಯ ತಂಡದಿಂದ, ದಿ ಶೈನಿಂಗ್ ಸ್ಟಾರ್ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
2014-15 ನೇ ಸಾಲಿನಲ್ಲಿ ಶೈಕ್ಷಣಿಕದಲ್ಲಿ ಅತ್ಯಂತ ಹೆಚ್ಚು ಅಂಕ್ಗ ಗಳಿಸಿದ ಬಂಟರ ವಿದ್ಯಾರ್ಥಿಗಳು ಹಾಗೂ ಇನ್ನಿತರ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಮಕ್ಕಲಿಗೆ ಡಾ| ಬಿ. ಆರ್. ಶೆಟ್ಟಿಯವರು ಮಕ್ಕಳ ಪೋಷಕರ ಸಮ್ಮುಖದಲ್ಲಿ ಪದಕ ನೀಡಿದರು. ಇದೆ ಸಂದರ್ಭದಲ್ಲಿ ಪ್ರಾಯೋಜಕರು, ವಿಜೇತ ಥ್ರೋಬಾಲ್ ತಂಡದ ಆಟಗಾರರು, ಮಾಧ್ಯಮ ಪ್ರತಿನಿಧಿಗಳನ್ನು ಸ್ಮರಣಿಕೆ ನೀದ್ ಗೌರವಿಸಲಾಯಿತು.
ಪ್ರೊಫೆಸರ್ ಬಾಲಕೃಷ್ಣ ಶೆಟ್ಟಿಯವರಿಗೆ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ” ಪ್ರಧಾನ
ಮುಖ್ಯ ಅತಿಥಿಯಾಗಿ ಆಗಮಿಸಿದ ಕಟೀಲು ಎಸ್.ಡಿ.ಟಿ.ಪಿ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಫ್ರೊಫೆಸರ್ ಬಾಲಕೃಷ್ಣ ಶೆಟ್ಟಿಯವರಿಗೆ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ” ಯನ್ನು ಸಮಸ್ಥ ಬಂಟ ಬಾಂಧವರ ಪರವಾಗಿ ಡಾ. ಬಿ. ಆರ್. ಶೆಟ್ಟಿಯವರು ಪ್ರಧಾನಿಸಿ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಶ್ರೀ ಗಣೇಶ್ ರೈ ಯವರು ವಾಚಿಸಿದರು. ಸನ್ಮಾನಕ್ಕೆ ಉತ್ತರವಾಗಿ ಫ್ರೊಫೆಸರ್ ಬಾಲಕೃಷ್ಣ ಶೆಟ್ಟಿಯವರು ಯು.ಎ.ಇ. ಯಲ್ಲಿ ನೆಲೆಸಿರುವ ಬಂಟ ಬಾಂಧವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಶ್ರೀಮತಿ ಸಂಗೀತ ಶೆಟ್ಟಿ ತಂಡದವರಿಂದ ಜನಪದ ಗೀತೆ, ಶ್ರೀಮತಿ ಹೇಮಾ ಮಹೇಶ್ ಶೆಟ್ಟಿಯವರ ನಿರ್ದೇಶನದಲ್ಲಿ ಅವಿರತ್ ಮತ್ತು ತಂಡದವರಿಂದ ಬಾಲಿವುಡ್ ನೃತ್ಯ ಮತ್ತು ಶ್ರೀ ಗಣೇಶ್ ಶೆಟ್ಟಿ ತಂಡದವರಿಂದ ಹಾಸ್ಯಪ್ರಹಸನ ನಡೆಯಿತು.
ಮನಸೆಳೆದ ಯು.ಎ.ಇ. ಮಟ್ಟದ ಜಾನಪದ ನೃತ ಸ್ಪರ್ಧೆ
ಹಿರಿಯರ ವಿಭಾಗ ಪ್ರಥಮ : ಜನಪದ ವೈಭವ – ದುಬಾಯಿ ತಂಡ
ದ್ವಿತೀಯ : ತುಳುನಾಡ ವೈಭವ – ಅಲ್ ಐನ್
ಪ್ರತಿ ವರ್ಷದಂತೆ ಈ ಬಾರಿಯೂ ಮನಸೆಳೆದ ಯು.ಎ.ಇ. ಮಟ್ಟದ ಜಾನಪದ ನೃತ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಯು.ಎ.ಇ. ಯ ವಿವಿಧ ಭಾಗಗಳಿಂದತಂಡಗಳು ಭಾಗವಹಿಸಿದ್ದು ಅದ್ಭುತ ಪ್ರದರ್ಶನ ನೀಡಿ ಜನಮನ ಸೆಳೆದರು.
ದಿನಪೂರ್ತಿ ನಡೆದ ಮನರಂಜನಾ ಕಾರ್ಯಕ್ರಮದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಿಸ್ ಬಂಟ್, ಮಿಸ್ಟರ್ ಬಂಟ್ ಕಿರೀಟ ಮುಡಿಗೆರಿಸಿ ಕೊಂಡರು.
ಮಿಸಸ್ ಬಂಟ್ ಪ್ರಥಮ – ಕ್ಷಮಾ ಸಂತೋಷ್ ರೈ
ಮಿಸ್ಟರ್ ಬಂಟ್ ಪ್ರಥಮ : ದೀಪಕ್ ಶೆಟ್ಟಿ
ಮಿಸಸ್ ಬಂಟ್ ದ್ವಿತೀಯ -1 : ಸುಷ್ಮಾ ಮಹೇಂದ್ರ ಶೆಟ್ಟಿ, ದ್ವಿತೀಯ – 2 : ಶಾಲಿನಿ ಪ್ರೇಮ್ ಶೆಟ್ಟಿ
ಮಿಸ್ಟರ್ ಬಂಟ್ ದ್ವಿತೀಯ – 1 : ಕಾರ್ತೀಕ್ ರೈ, ದ್ವಿತೀಯ -2 : ಅಭಿಶೇಕ್ ಶೆಟ್ಟಿ
ಮಿಸಸ್ ಫ್ಯಾಶನೆಬಲ್ ಬಂಟ್ : ಕ್ಷಮಾ ಸಂತೋಷ್ ರೈ
ಮಿಸ್ಟರ್ ಫ್ಯಶನೆಬಲ್ ಬಂಟ್ : ದೀಪಕ್ ಶೆಟ್ಟಿ
ಮಿಸ್ ಬಂಟ್ ಟ್ಯಾಲೆಂಟ್ : ಐಶ್ವರ್ಯ ರೈ
ಮಿಸ್ತರ್ ಬಂಟ್ ಟ್ಯಾಲೆಂಟ್ : ದೀಪಕ್ ಶೆಟ್ಟಿ
ಮಿಸಸ್ ಪಾಪ್ಯುಲರ್ ಬಂಟ್ : ಸುಷ್ಮಾ ಶೆಟ್ಟಿ
ಮಿಸ್ಟರ್ ಪಾಪ್ಯುಲರ್ ಬಂಟ್ : ಕಾರ್ತಿಕ್ ರೈ
ಮಿಸಸ್ ಕಂಜನಲಿಟಿ ( ಸ್ಪರ್ದಿಗಳು ಅಂತರಿಕವಾಗಿ ಆಯ್ಕೆ ಮಾಡಿದ್ದು) ಬಂಟ್ : ಶಾಲಿನಿ ಪ್ರೇಮ್ ಶೆಟ್ಟಿ
ಈ ಬಾರಿಯ ವಿಶೇಷ ಕಾರ್ಯಕ್ರಮವಾಗಿ ಮಿಸ್ ಬಂಟ್, ಮಿಸ್ಟರ್ ಬಂಟ್ ಸ್ಪರ್ಧೆ ಏರ್ಪಡಿಸಲಾಗಿದ್ದು ಮೊದಲ ಹಂತದಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದು ಮಹಿಳಾ ವಿಭಾಗದಲ್ಲಿ ಹನ್ನೆರಡು ಮಂದಿ ಪುರುಷರ ವಿಭಾಗದಲ್ಲಿ ಎಂಟು ಮಂದಿ ಆಯ್ಕೆಯಾಗಿದ್ದರು ಅಂತಿಮ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳು ಕು. ಐಶ್ವರ್ಯ ರೈ, ಚೈತ್ರ ಶೆಟ್ಟಿ, ಚಿತ್ರ ಪ್ರಸನ್ನ ಶೆಟ್ಟಿ, ದೀಪ್ತಿ ಶೆಟ್ಟಿ, ಕ್ಷಮಾ ಸಂತೋಷ್ ರೈ, ಕೀರ್ತಿ ಗುರುಪ್ರಸಾದ್ ಶೆಟ್ಟಿ, ಮೋನಿಷಾ ಶರತ್ ಶೆಟ್ಟಿ, ನಯನಾ ವಿಶ್ವನಾಥ್ ಶೆಟ್ಟಿ, ರಿತಿಕಾ ಶೆಟ್ಟಿ, ಶಾಲಿನಿ ಪ್ರೇಮ್ ಶೆಟ್ಟಿ, ಸುಶ್ಮಾ ಮಹೇಂದ್ರ ಶೆಟ್ಟಿ, ವಿಂದ್ಯಾ ಗುರುಪ್ರಸಾದ್ ಶೆಟ್ಟಿ ಪುರುಷರ ವಿಭಾಗದಲ್ಲಿ ಅಭಿಶೇಕ್ ಶೆಟ್ಟಿ, ಅಶ್ವಿನ್ ಶೆಟ್ಟಿ, ದೀಪಕ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಸಂತೋಷ್ ರೈ, ಯತೀಂದ್ರ ಶೆಟ್ಟಿ, ಕಾರ್ತಿಕ್ ರೈ. ಅಯ್ಕೆಯಾದ ತಂಡದವರ ಭಾವ ಚಿತ್ರಗಳು ಫೇಸ್ ಬುಕ್ ತಾಣದಲ್ಲಿ ಪ್ರಕಟವಾಗಿದ್ದು ಸಹಸ್ರಾರು ಮಂದಿ ಸ್ಪರ್ಧಿಗಳಿಗೆ ಲೈಕ್ ಕ್ಲಿಕ್ ಮಾಡಿ ತಮ್ಮ ತಮ್ಮ ಬೆಂಬಲ ಸೂಚಿಸಿ ಆಶೀರ್ವಾದ ಮಾಡಿದ್ದಾರೆ.
ಪ್ರೇಕ್ಷಕರ ಗಮನ ಸೆಳೆದ ಉಡುಪಿಯ ಪ್ರಖ್ಯಾತ ಕಾರ್ಯಕ್ರಮ ನಿರೂಪಕರಾದ ಶ್ರೀ ಅವಿನಾಶ್.
ಯು.ಎ.ಇ. ಬಂಟ್ಸ್ ಆಯೋಜಿಸಿದ ಈ ವಿಶೇಷ ಸ್ಪರ್ಧೆಯನ್ನು ನಡೆಸಿ ಕೊಟ್ಟವರು ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಶೃತಿ ದಿನಕರ್ ಶೆಟ್ಟಿ ಹಾಗೂ ಉಡುಪಿಯಿಂದ ಅತಿಥಿಯಾಗಿ ಆಗಮಿಸಿದ ಪ್ರಖ್ಯಾತ ಕಾರ್ಯಕ್ರಮ ನಿರೂಪಕರಾದ ಶ್ರೀ ಅವಿನಾಶ್.
ಹಲವು ದಿನಗಳಿಂದ ಪೂರ್ವಭಾವಿ ತಯಾರಿಯ ಹಿಂದೆ ಶ್ರೀಯುತರುಗಳಾದ ಮನೋಜ್ ಶೆಟ್ಟಿ, ಕಿರಣ್ ಶೆಟ್ಟಿ. ಗುರುಪ್ರಸಾದ್ ಷೆಟ್ಟಿ ಪೂರ್ಣ ಸನ್ಕಾರ, ಬೆಂಬಲ ನೀಡಿ ಯಶಸ್ಸಿನ ಹಿಂದಿನ ರುವಾರಿಗಾಳಾಗಿದ್ದರು.
ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ದುಬಾಯಿಯಿಂದ, ಶ್ರೀಮತ್ ಮತ್ತು ಶ್ರೀ ದಿನ್ಕರ್ ಶೆಟ್ಟಿ / ಶೃತಿ ಶೆಟ್ಟಿ, ಪ್ರಕಾಶ್ ಪಕ್ಕಳ, ದಿವ್ಯ ಪಕ್ಕಳ, ಶಿವ ಶೆಟ್ಟಿ / ಅಕ್ಷತ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ / ಲತಿಕಾ ಶೆಟ್ಟಿ, ಶಾರ್ಜಾದಿಂದ, ಗುರುಚರಣ್ ರೈ / ಶ್ರೀದೇವಿ ರೈ, ಅಬುಧಾಬಿಯಿಂದ, ರನ್ಜಿತ್ ರೈ / ಷರ್ಮಿಳ ರೈ, ಸಚೀಂದ್ರ ಶೆಟ್ಟಿ / ಅಕ್ಶ ಶೆಟ್ಟಿ, ಆಬುಧಾಬಿಯಿಂದ, ಕಾಮರಾಜ್ ಶೆಟ್ಟಿ/ ರಶ್ಮಿ ಶೆಟ್ಟಿ, ಸದಾನಂದ್ ಶೆಟ್ಟಿ/ ವಿದ್ಯಾವತಿ ಶೆಟ್ಟಿ, ಇವರುಗಳು ಶ್ರೀ ಸರ್ವೊತ್ತಮ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಲವು ಸಮಯದಿಂದ ಪೂರ್ವ ತಯಾರಿಯೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.