ತಬೂಕ್: ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್ ನ ಚೆರ್ ಮ್ಯಾನ್ ಹುದ್ದೆಗೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗೆ ಖ್ಯಾತ ಸಮಾಜ ಸೇವಕ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿ ಜನಮನ್ನಣೆ ಗಳಿಸಿರುವ ಜನಾಬ್ ಅಬ್ದುಲ್ ರಹ್ಮಾನ್ ದಾರಿಮಿಯವರು ನಾಮಪತ್ರ ಸಲ್ಲಿಸಿದ್ದಾರೆ.
ಇಂಡಿಯನ್ ಸ್ಕೂಲ್ ನ ಪ್ರಿನ್ಸ್ ಪಾಲ್ ರಾದ ಜನಾಬ್ ಶಂಸುದ್ದೀನ್ ರವರ ಸಮ್ಮುಖದಲ್ಲಿ ನಡೆಯುವ ಈ ಚುನಾವಣೆಗೆ ಸರಿಸುಮಾರು 12 ನಾಮಪತ್ರ ಸಲಿಕೆಯಾಗಿದ್ದು, ಅದರಲ್ಲಿ 3 ನಾಮಪತ್ರ ತಿರಸ್ಕ್ರತಗೊಂಡು ಅಂತಿಮ ಹಂತಕೆ 9 ನಾಮಪತ್ರಗಳು ಚಾಲ್ತಿಯಲ್ಲಿದೆ. ಪ್ರಸಕ್ತ ಕಣದಲ್ಲಿರುವ ಜನಾಬ್ ಅಬ್ದುಲ್ ರಹ್ಮಾನ್ ದಾರಿಮಿ ಯವರು ಮೂಲತಃ ದಕ್ಷಿಣ ಕನ್ನಡದವರಾಗಿರುವ ಶ್ರೀಯುತರು ತನ್ನನ್ನು ಸಮಾಜ ಸೇವೆಗಳಲ್ಲಿ ತೊಡಗಿಸಿಕ್ಕೊಂಡಿದ್ದಾರಲ್ಲದೆ, ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕ್ಕೊಂಡಿದ್ದಾರೆ. ಆದ್ದರಿಂದ ಮುಂದಿನ ದಿನದಲ್ಲಿ ನಡೆಯುವ ಚುನಾವಣೆಯಲ್ಲಿ ಜನಾಬ್ ಅಬ್ದುಲ್ ರಹ್ಮಾನ್ ದಾರಿಮಿಯವರು ಹೆಚ್ಹಿನ ಮತಗಳೊಂದಿಗೆ ಜಯಗಳಿಸಲೆಂದು ಹಾರೈಸೋಣ.
ವರದಿ:ಅನೀಶ್ ಅಹ್ಮದ್ ಸಾಲ್ಮರ