ಕರ್ನಾಟಕ ಸಂಘ ಶಾರ್ಜಾ, ಇದೇ ಬರುವ ನವಂಬರ್ ತಿಂಗಳಲ್ಲಿ ಪ್ರತಿ ವರ್ಷದಂತೆ ವಿಹಾರ ಕೂಟವನ್ನು ಜೊತೆಗೆ ಸಾಂಕೇತಿಕವಾಗಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನ್ನೂ ಹಮ್ಮಿಕೊಂಡಿದೆ. ಈ ವಿಹಾರ ಕೂಟವನ್ನು ದಿನಾಂಕ 28.11.2014 ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 5 ರ ತನಕ ದುಬೈನ ಝಬೀಲ್ ಪಾರ್ಕನಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ. ಮನರಂಜಿಸುವ ಅನೇಕ ಕಾರ್ಯಕ್ರಮ ವೈವಿಧ್ಯದೊಂದಿಗೆ ವಯೋಮಾನ ಮಿತಿ ಇಲ್ಲದ ಆಟೋಟ ಸ್ಪರ್ಧೆಗಳೂ ನಡೆಯಲಿವೆ.
ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗೀದಾರರಾಗಿರಿ. ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸಲಾಗುವುದು. ಮೇಲಿನ ದಿನಾಂಕವನ್ನು ನಿಮ್ಮ ಡೈರಿಯಲ್ಲಿ ನಮೂದಿಸಿ ಕಾದಿರಿಸಿರಿ.