ಕನ್ನಡ ವಾರ್ತೆಗಳು

2015ನೇ ಸಾಲಿನ ಪ.ಗೋ.ಪ್ರಶಸ್ತಿಗೆ ಚಂದ್ರಹಾಸ ಚಾರ್ಮಾಡಿ ಅಯ್ಕೆ

Pinterest LinkedIn Tumblr

PaGo_Prasasti_chshkr

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2015ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ನಿರಂತರ ಪ್ರಗತಿ’ ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದಾರೆ.

2015ರ ಸೆಪ್ಟೆಂಬರ್ 15 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇಹ ನಾಡಲ್ಲಿ, ಮನಸ್ಸು ಕಾಡಲ್ಲಿ…” ಅವರ ಈ ವರದಿಗೆ ಈ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯು ರೂ.10,001/ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಕಟನೆ ತಿಳಿಸಿದೆ.

ಚಂದ್ರಹಾಸ ಚಾರ್ಮಾಡಿಯವರು ಪ್ರಸ್ತುತ ಕಳೆದ 7 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಿತ ರಾಜ್ಯದಾದ್ಯಂತ 4 ಲಕ್ಷ ಪ್ರಸಾರವನ್ನು ಹೊಂದಿರುವ ನಿರಂತರ ಪ್ರಗತಿ ಮಾಸಪತ್ರಿಕೆಯ‌ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ, ಸುಧಾ, ಡೆಕ್ಕನ್ ಹೆರಾಲ್ಡ್, ತರಂಗ, ಕರ್ಮವೀರ, ಕೃಷಿಪೇಟೆ, ಸುದ್ದಿಬಿಡುಗಡೆ ‌ಉದಯವಾಣಿ, ವಿಜಯವಾಣಿ, ವಿಜಯಕರ್ನಾಟಕ, ಹೊಸದಿಗಂತ ದಿನಪತ್ರಿಕೆಗಳಲ್ಲಿ ಈವರೆಗೆ ಸುಮಾರು 4,500 ಲೇಖನ, ನುಡಿಚಿತ್ರಗಳು ಪ್ರಕಟಗೊಂಡಿದ್ದು ಈಗಲೂ ಪ್ರಕಟಗೊಳ್ಳುತ್ತಿವೆ.

ಕಾಲೇಜು ದಿನಗಳಲ್ಲಿ ಹನಿಗವನ ಮತ್ತು ಕವನ ಸ್ಪರ್ಧೆಯಲ್ಲಿರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುತ್ತದೆ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ‌ಆಯ್ಕೆಗೊಂಡಿರುತ್ತಾರೆ.ಕಳೆದ ೫ ವರ್ಷಗಳಿಂದ ಛಾಯಾಚಿತ್ರ ಗ್ರಾಹಕರಾಗಿಯೂ ಗುರುತಿಸಿಗೊಂಡು ಮದುವೆ ಮುಂತಾದ ಶುಭ ಸಂದರ್ಭಗಳ ಛಾಯಾಚಿತ್ರಗ್ರಹಣ ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಗಳೂರು, ಇವರಿಂದ ಪ್ರಕಟಿತ ಕೃಷಿಪೇಟೆ ಮಾಸಪತ್ರಿಕೆಯಲ್ಲಿ ಪ್ರಕಟಿತ‌ ಇವರ ಬರಹಕ್ಕೆ ೨೦೧೫ನೇ ಸಾಲಿನ ಉತ್ತಮ ಲೇಖನ ಪ್ರಶಸ್ತಿ ಲಭಿಸಿರುತ್ತದೆ. ಲೇಖನಗಳಿಗಾಗಿ ರಾಜ್ಯದಾದ್ಯಂತ ಪ್ರವಾಸಗೈಯ್ಯುತ್ತಾರೆ.

Write A Comment