ಕನ್ನಡ ವಾರ್ತೆಗಳು

ಹಿರಿಯಡಕದಲ್ಲಿ ಬೈಕಾಡ್ತಿ ಹಾಗು ರಕ್ತೇಶ್ವರಿ ದೈವಸ್ಥಾನದ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು “ಪಾಕ ಶಾಲೆ” ಉಧ್ಘಾಟನೆ

Pinterest LinkedIn Tumblr

heriyadka_temple_1

ಉಡುಪಿ,ಮಾ.25: ಹಿರಿಯಡಕದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಸಂಬಂದಪಟ್ಟ ಬೈಕಾಡ್ತಿ ಹಾಗು ರಕ್ತೇಶ್ವರಿ ದೈವಸ್ಥಾನದ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಮಾರಂಭವು ಬುಧವಾರ ಜರುಗಿತು. ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು “ಪಾಕ ಶಾಲೆ”ಯನ್ನು ಉಧ್ಘಾಟಿಸಿ ಆಶೀರ್ವಚನ ನೀಡಿದರು.

ಧಾರ್ಮಿಕ ಕಾರ್ಯಕ್ರಮಗಳು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಅಡಿಗರ ನೇತೃತ್ವದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಅಶೋಕ್ ಸೇರಿಗಾರ್ ಇವರ ಸ್ಯಾಕ್ಸೋಫೋನ್ ಸಂಗೀತ ಕಾರ್ಯಕ್ರಮ ಜರುಗಿತು ಮತ್ತು ದಿನೇಶ್ ಸೇರಿಗಾರ್, ಸುಧಾಕರ ಸೇರಿಗಾರ್ ಮತ್ತು ಶಾಮರಾಯ ಆಚಾರ್ಯ ಇವರುಗಳಿಗೆ ಗೌರವಿಸಲಾಯಿತು.

heriyadka_temple_2 heriyadka_temple_3 heriyadka_temple_4 heriyadka_temple_5 heriyadka_temple_6 heriyadka_temple_7 heriyadka_temple_8 heriyadka_temple_9 heriyadka_temple_10 heriyadka_temple_11 heriyadka_temple_12 heriyadka_temple_13 heriyadka_temple_14 heriyadka_temple_15 heriyadka_temple_16 heriyadka_temple_17 heriyadka_temple_18 heriyadka_temple_19 heriyadka_temple_20 heriyadka_temple_21 heriyadka_temple_22 heriyadka_temple_23 heriyadka_temple_24 heriyadka_temple_25 heriyadka_temple_26 heriyadka_temple_27 heriyadka_temple_28 heriyadka_temple_29 heriyadka_temple_30 heriyadka_temple_31 heriyadka_temple_32 heriyadka_temple_33

ದೈವಸ್ಥಾನದ ಅರ್ಚಕರಾದ ಬಾಬು ಸೇರಿಗಾರ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ನರಸಿಂಹ ಸೇರಿಗಾರ್, ಅಧ್ಯಕ್ಷ ರಾಜೇಂದ್ರ ಕುಮಾರ, ಕಾರ್ಯದರ್ಶಿ ರಮೇಶ ಸೇರಿಗಾರ್ ಇವರುಗಳನ್ನು ಒಳಗೊಂದು ಹಲವಾರು ಸ್ವಯಂ ಸೇವಕರು, ರಾಜಾರಾಂ ಹೆಗ್ಡೆ, ಪ್ರಕಾಶ ಪೈ ಮತ್ತು ರಾಮದಾಸ್ ಹೆಗ್ಡೆ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು

Write A Comment