ಕನ್ನಡ ವಾರ್ತೆಗಳು

ಏ.25ರಿಂದ 30 : ರಜಾ ಮಜಾ ಪಿಲಿಕುಳ ಬೇಸಿಗೆ ಶಿಬಿರ-2016

Pinterest LinkedIn Tumblr

Pilikula_photo_1

ಮಂಗಳೂರು,ಮಾ.21 : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಈ ಬಾರಿ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ತಿಂಗಳಿಗೊಂದು ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ ತಿಂಗಳಲ್ಲಿ ಮಕ್ಕಳ ಸಂಭ್ರಮಕ್ಕೆ ಪಿಲಿಕುಳ ಸಜ್ಜಾಗುತ್ತಿದೆ. ಏಪ್ರಿಲ್ 25ರಿಂದ 30 ರ ತನಕ ಪಿಲಿಕುಳ ರಜಾ ಮಜಾ ಜರುಗಲಿದ್ದು, ಜಿಲ್ಲೆಯ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಲಿದ್ದಾರೆ. ಬೆಳಿಗ್ಗೆ 9.45 ಕ್ಕೆ ಆರಂಭಗೊಂಡು ಸಂಜೆ 4.30 ರವರೆಗೆ ಶಿಬಿರ ಜರುಗಲಿದೆ.

ಕ್ರಿಯಾತ್ಮಕ ಚಿತ್ರಕಲೆ, ಸ್ವರಾನುಕರಣೆ, ನೆನೆಪಿಗೆ ಚಿಕಿತ್ಸೆ, ಮೈಮ್, ಜಾದೂ, ರಂಗಕ್ರಿಯೆ, ಸಂಗೀತ, ನಾಟಕ, ಗೊಂಬೆ ತಯಾರಿ, ಪತ್ರಿಕೆ ತಯಾರಿ, ಕೊಲಾಜ್, ವರ್ಲಿ ಆರ್ಟ್, ಕ್ಲೇ ಮೋಡಲ್, ಆಟಗಳು, ವಿಜ್ಞಾನ ಮಾದರಿ, ವಿನೋದ ಗಣಿತ, ಒರಿಗಾಮಿ, ಫೇಸ್ ಪೈಂಟಿಂಗ್, ಟ್ಯಾಟೂ ಮೊದಲಾದ ಕ್ರಿಯಾಶೀಲ ಚಟುವಟಿಕೆಗಳನ್ನು ಕಾರ್ಯಾಗಾರ ಒಳಗೊಂಡಿದೆ. ಜೊತೆಗೆ ಔಷಧಿ ಸಸ್ಯಗಳ ಪರಿಚಯ, ಮೃಗಾಲಯ, ಕುಶಲಕರ್ಮಿಗ್ರಾಮ, ವಿಜ್ಞಾನ ಕೇಂದ್ರ, ಸಂಸ್ಕೃತಿಗ್ರಾಮ ಭೇಟಿಯ ವಿಶೇಷ ಅವಕಾಶವನ್ನು ಈ ಶಿಬಿರದಲ್ಲಿ ಒದಗಿಸಲಾಗುವುದು.

6 ದಿನಗಳ ಕಾಲ ಶಿಬಿರಕ್ಕೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಒದಗಿಸಲಿದ್ದು, ಬೆಳಿಗ್ಗೆ ಮತ್ತು ಸಂಜೆ ಲಘುಪಹಾರ, ಪಾನೀಯ, ಮಧ್ಯಾಹ್ನದ ಊಟ ಜೊತೆಗೆ ಮಂಗಳೂರು ನಗರ ಕೇಂದ್ರದಿಂದ ಬಸ್ಸಿನ ಸೌಲಭ್ಯವನ್ನೂ ಒದಗಿಸಲು ನಿರ್ಧರಿಸಲಾಗಿದೆ. ರೂ 2,000/- ಶುಲ್ಕದೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಬಹುದು. ಬೇಸಿಗೆ ಶಿಬಿರದ ಸಂಪೂರ್ಣ ಮಾಹಿತಿಯನ್ನು ಡಾ.ನಿತಿನ್ ಎನ್.ಕೆ 9686673237 ಮತ್ತು ಮೈಮ್ ರಾಮ್‌ದಾಸ್ 9448654040 ಇವರಿಂದ ಪಡೆಯಬಹುದು.

Write A Comment