ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬುಧವಾರ ಆರಂಭಗೊಂಡ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಚರಣೆ ಇಂದು ಕೂಡ ಮುಂದುವರಿದಿದ್ದು, ನಗರದ ಹಲವೆಡೆ ಅನುಮತಿ ಇಲ್ಲದೇ ವ್ಯಾಪಾರ ಮಾಡುತ್ತಿದ್ದ ಅನಧಿಕೃತ ಗೂಡಂಗಡಿಗಳನ್ನು ಮನಪಾ ಅಧಿಕಾರಿಗಳ ತಂಡ ತೆರವುಗೊಳಿಸಿದೆ.
ಹಲವು ಸಮಯಗಳ ಬಳಿಕ ಮತ್ತೊಮ್ಮೆ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಚರಣೆಯನ್ನು ಮ.ನ.ಪಾ ಆಯುಕ್ತರ ನೇತೃತ್ವದಲ್ಲಿ ನಿನ್ನೆಯಿಂದ ನಡೆಸಲಾಗಿದ್ದು, ಎರಡನೇ ದಿನವಾದ ಇಂದು ಮುಂಜಾನೆಯಿಂದಲೇ ಮಂಗಳೂರಿನ ಪಂಪವೆಲ್ ಪರಿಸರ, ಕಂಕನಾಡಿ ಪ್ರದೇಶ ಹಾಗೂ ನಗರದ ಇನ್ನಿತರ ಹಲವೆಡೆಗಳಲ್ಲಿ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಚರಣೆ ನಡೆಸಲಾಯಿತು.
ಅನಧಿಕೃತ ಗೂಡಂಗಡಿಗಳ ತೆರವುಗೊಳಿಸುವಂತೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಮ.ನ.ಪಾ. ಆಯುಕ್ತರ ನಿರ್ದೇಶನದಂತೆ ಕಂದಾಯ ಅಧಿಕಾರಿ ಪ್ರವೀಣ್ಚಂದ್ರ ಹಾಗೂ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿಯವರ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿಲಾಗಿದೆ..