ಕನ್ನಡ ವಾರ್ತೆಗಳು

ಬೈಕಿಗೆ ಬಸ್ ಡಿಕ್ಕಿ :ಸವಾರ ಸಾವು

Pinterest LinkedIn Tumblr

ಕಾಸರಗೋಡು, ಫೆ.26: ಕುಂಬಳೆ-ಪೆರ್ಲ ರಸ್ತೆಯ ಅಂಗಡಿಮೊಗರು ಬಳಿ ನಿನ್ನೆ ಬೆಳಿಗ್ಗೆ ಖಾಸಗಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ.

ಪೆರ್ಲ ಬಳಿಯ ಶೇಣಿ ನಡುಬೈಲು ನಿವಾಸಿ ಸಂಪತ್ (೨೮) ಮೃತ ಯುವಕ ಎರ್ನಾಕುಲಮ್ ನಲ್ಲಿ ವೆಲ್ಡರ್ ವೃತ್ತಿಯಲ್ಲಿದ್ದ ಅವರು ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಮನೆಯ ಕೆಲಸಗಳನ್ನು ನೋಡಿಕೊಳ್ಳಲು ಕೆಲದಿನಗಳ ಹಿಂದಷ್ಟೇ ಊರಿಗೆ ಮರಳಿದ್ದರು. ನಿನ್ನೆ ಬೆಳಿಗ್ಗೆ ಕಾರ್ಯ ನಿಮಿತ್ತ ತನ್ನ ಬೈಕಿನಲ್ಲಿ ಸೀತಾಂಗೋಳಿ ತೆರಳುತ್ತಿದ್ದಾಗ ಅಂಗಡಿಮೊಗರು ಬಳಿಯ ನಾಟಿಕಲ್ಲು ಕ್ವಾರಿ ಪರಿಸರದ ರಸ್ತೆಯಲ್ಲಿ ಕುಂಬಳೆಯಿಂದ ಪೆರ್ಲಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಹಿತ ರಸ್ತೆಗೆಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment