
ಮಂಗಳೂರು,ಡಿ.31: ದೇಶದ ಪ್ರತಿಷ್ಠಿತ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ, ಇಂಡಿಯನ್ ಡೆಂಟಲ್ ಆಸೋಸಿಯೇಶನ್ ಕೇಂದ್ರ ಸಮಿತಿ ಸದಸ್ಯ ಡಾ. ಶಿವಶರಣ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ದಂತ ವೈದ್ಯರಾಗಿರುವ ಅವರು ಪ್ರಸ್ತುತ ಪ್ರೇಮಕಾಂತಿ ಎರ್ಜುಕೇಶನ್ ಟ್ರಸ್ಟ್ ನ ನಿರ್ದೇಶಕರಾಗಿ, ನಮ್ಮ ಟಿ.ವಿ ವಾಹಿನಿಯ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.