ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಡಿ.6: ಸ್ವಸ್ತಿ ಆರ್ಎಕ್ಸ್ ಟ್ರಸ್ಟ್ ನಿಯೋಜಿತ 9ನೇ ವರ್ಷದ ಆರ್ಎಕ್ಸ್ ಲೈಫ್ ಹರ್ ಕ್ಯುಲಸ್ ಸೈಕಲ್ ರ್ಯಾಲಿಗೆ ರವಿವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಶ್ರೀ ಎಸ್ ಮುರುಗನ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಕಮಿಷನರ್, ರಸ್ತೆ ಸುರಕ್ಷತೆ ಈ ಸಲದ ರ್ಯಾಲಿಯ ಉದ್ದೇಶವಾಗಿದ್ದು ” ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ: ಧೈಯ ವಾಕ್ಯ .ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಆಗ್ರಹಿಸಲು ಹಾಗೂ ಚತುಷ್ಚಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್ಯಾಲಿಯು ಸಹಾಯಕಾರಿಯಾಗಲಿದೆ ಎಂದು ಹೇಳಿದರು.
ಸ್ವಸ್ತಿ ಆರ್.ಎಕ್ಸ್ ಲೈಫ್ ಟ್ರಸ್ಟ್ ನ ಟ್ರಸ್ಠಿಗಳಾದ ಡಾ.ಗಾಯತ್ರಿ, ವಂದನಾ ನಾಯಕ್, ಸಂಚಾಲಕರಾದ ಗಿರಿಧರ್ ಕಾಮಾತ್, ಸುನೀಲ್ ದತ್ತ್ ಪೈ, ನಗರದ ಉದ್ಯಮಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಮತ್ತಿತ್ತರರು ಉಪಸ್ಥಿತರಿದ್ದರು. ನರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
7 ವರ್ಷದ ಪುಟಾಣಿಗಳಿಂದ ಹಿಡಿದು 70 ವರ್ಷದ ವಯೋವೃದ್ಧರವರೆಗೆ ಸಾವಿರಕ್ಕೂ ಹೆಚ್ಚು ಮಂದಿ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಗರದ ಮಂಗಳಾ ಸ್ಟೇಡಿಯಂ ಮುಂಭಾಗದಿಂದ ಆರಂಭಗೊಂಡ ರ್ಯಾಲಿಯು ಲೇಡಿಹಿಲ್, ಲಾಲ್ಭಾಗ್, ಬಿಜೈ- ಮಾಲೆಮಾರ್ – ಕುಳೂರು-ಪಣಂಬೂರು-ಉರ್ವಸ್ಟೋರ್- ಅಶೋಕನಗರ- ಹೊಯ್ಗೆ ಬೈಲ್ – ಬತ್ತೇರಿ ಮಾರ್ಗವಾಗಿ ಸಾಗಿ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಸಮಾರೋಪಗೊಂಡಿತ್ತು.
ಕನ್ನಡಿಗ ವರ್ಲ್ಡ್ ಛಾಯಾಚಿತ್ರ ಸ್ಪರ್ಧೆ:
ಇದೇ ಸಂದರ್ಭದಲ್ಲಿ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಪ್ರಯೋಜಕತ್ವದಲ್ಲಿ ಸೈಕಲ್ ರ್ಯಾಲಿಯ ಪೋಟೊ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವಿಷಯ: ಸಮೂಹ ಸವಾರಿ (ರೈಡಿಂಗ್ ಟುಗೆದರ್ ), ಇದರಲ್ಲಿ ಎಲ್ಲರೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಚಿತ್ರವನ್ನು ರ್ಯಾಲಿಯ ಸಮಯದಲ್ಲಿ ಸೆರೆಹಿಡಿದು, ಒಬ್ಬರು ೩ ಫೋಟೊವನ್ನು ಕಳಿಸುವಂತೆ ಕೋರಲಾಗಿದೆ.
ಕಳಿಸಬೇಕಾದ ವಿಳಾಸ :svastirxlife@gmail.com, ಡಿಸೆಂಬರ್ 10ರ ಒಳಗೆ ಒಳಗೆ ಕಳುಹಿಸಬೇಕು ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆಯ್ದು ಫೋಟೊಗಳಿಗೆ 3 ಬಹುಮಾನಗಳನ್ನು ( ರೂ 3000 / 2000/ 1000) ನೀಡಲಾಗುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0824 – 2457192 ಅಥವಾ ವೈಬ್ ಸೈಟ್: www.rxlife.in ಅನ್ನು ಸಂಪರ್ಕಿಸ ಬಹುದು