ಕನ್ನಡ ವಾರ್ತೆಗಳು

ಉಡುಪಿ: ಕಾಲಿನ ಚಿಕಿತ್ಸೆಗೆ ಸುಭದ್ರೆ ಶಿವಮೊಗ್ಗದ ಸಕ್ರೆಬೈಲಿಗೆ

Pinterest LinkedIn Tumblr

ಉಡುಪಿ: ಶ್ರೀಕೃಷ್ಣ ಮಠದ ಹೆಣ್ಣಾನೆ ಸುಭದ್ರೆಯನ್ನು (21) ಕಾಲಿನ ಚಿಕಿತ್ಸೆಗಾಗಿ ಒಂದು ತಿಂಗಳ ಅವಧಿಗೆ ಶಿವಮೊಗ್ಗ ಸಕ್ರೆಬೈಲಿನ ಆನೆ ಶಿಬಿರಕ್ಕೆ ಕಳುಹಿಸಲಾಗಿದೆ.

Udupi_Elephant_subhadre

ಇತ್ತೀಚೆಗೆ ಸುಭದ್ರೆಯ ಕಾಲಿಗೆ ಗಾಯವಾಗಿ ನಡೆಯಲು ಕಷ್ಟವಾಗುತ್ತಿತ್ತು. ನಂತರದ ದಿನಗಳಲ್ಲಿ ಶಿವಮೊಗ್ಗ ವಲಯ ಆರೋಗ್ಯಾಧಿಕಾರಿ ಡಾ| ವಿನಯ್ ಅವರು ಉಡುಪಿಗೆ ಬಂದು ಆನೆಯನ್ನು ಪರೀಕ್ಷಿಸುತ್ತಿದ್ದರು. ಎರಡು ತಿಂಗಳುಗಳಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು. ಸುಭದ್ರೆಗೆ ಪ್ರತಿನಿತ್ಯ ಪರೀಕ್ಷಿಸಲು ಅನುಕೂಲವಾಗುವಂತೆ ಆರೋಗ್ಯಾಧಿಕಾರಿಗಳ ಸಲಹೆ ಮೇರೆಗೆ ಉಡುಪಿ ಹಾಗೂ ಕುಂದಾಪುರ ವಲಯ ಅರಣ್ಯಾಧಿಕಾರಿಗಳ ಅನುಮತಿಯೊಂದಿಗೆ ಸಕ್ರೆಬೈಲಿಗೆ ಕಳುಹಿಸಲಾಯಿತು. ಜ. 9 ರಂದು ಚಿಕಿತ್ಸೆ ಮುಗಿದು ಹಿಂತಿರುಗಿ ಕಳುಹಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಪರ್‍ಯಾಯ ಮಹೋತ್ಸವ ಕಾರ್ಯಕ್ರಮವೂ ಬರುವ ಕಾರಣದಿಂದಾಗಿ ಸುಭದ್ರೆಗೆ ಈಗ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

Write A Comment