ಕನ್ನಡ ವಾರ್ತೆಗಳು

ಪುತ್ತೂರು : ಕಾರಲ್ಲಿ ಗಾಂಜಾ ಪತ್ತೆ : ಆರೋಪಿ ಸೆರೆ

Pinterest LinkedIn Tumblr

puttur_Ganja_accsed

ಪುತ್ತೂರು,ಡಿ.01: : ಕಾರಿನಲ್ಲಿ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಎಸ್. ರಾಯವರಂ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಬೆಳಂದೂರು ನಿವಾಸಿ ಮಹಮ್ಮದ್‌ ಹನೀಫ್‌ (31)ನನ್ನು ಪುತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಎಸ್‌. ರಾಯವರಂ ಠಾಣಾ ವ್ಯಾಪ್ತಿಯಲ್ಲಿ ಇನ್ನೋವಾ ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ಕಾರಿನೊಳಗಡೆ ಗಾಂಜಾ ಪ್ಯಾಕೆಟ್‌ಗಳಿದ್ದವು. ಕಾರು ಚಾಲಕ ಮಹಮ್ಮದ್‌ ಹನೀಫ್‌ ಪರಾರಿಯಾಗಿದ್ದ. ಬಂಟ್ವಾಳದ ಗಡಿಯಾರದ ಸಂತೋಷ್‌ ಮಾಲಕತ್ವದ ಇನ್ನೋವಾ ಕಾರಿನ ಪವರ್‌ ಆಫ್‌ ಅಟಾರ್ನಿಯನ್ನು ಮಹಮ್ಮದ್‌ ಹನೀಫ್‌ಗೆ ನೀಡಲಾಗಿತ್ತು. ಹನೀಫ್‌ ಕಾರನ್ನು ದುರುಪಯೋಗಪಡಿಸುತ್ತಿದ್ದಾನೆ ಎಂದು ಕಾರು ಮಾಲಕ ಸಂತೋಷ್‌ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆರೋಪಿ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಪುತ್ತೂರು ನಗರ ಠಾಣೆ ಪೊಲೀಸರು ಗಾಂಜಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪ್ರಕರಣವನ್ನು ಆಂಧ್ರಪ್ರದೇಶದ ಯೆಲಮಂಚಲಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಆರೋಪಿಯನ್ನು ಎಸ್‌. ರಾಯವರಂ ಠಾಣೆಯ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

Write A Comment