ಕುಂದಾಪುರ: ಅಣ್ಣನ ಅಂತ್ಯಸಂಸ್ಕಾರಕ್ಕೆಂದು ಬೆಂಗಳೂರಿನಿಂದ ಬಂದು ಹೆಮ್ಮಾಡಿಯ ನಿವಾಸದಲ್ಲಿ ಅಂತ್ಯಸಂಸ್ಕಾರ ಕೆಲಸ ಮುಗಿಸಿ ವಾಪಾಸ್ಸು ಬೆಂಗಳುರಿಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ನೆಲಮಂಗಲ ಸಮೀಪ ಈ ದುರ್ಘಟನೆ ನಡೆದಿದೆ.
ಹೆಮ್ಮಾಡಿಯ ಮೂವತ್ತುಮುಡಿ ನಿವಾಸಿ ಪ್ರಸ್ತುತ ಬೆಂಗಳುರಿನಲ್ಲಿ ಬೀಡಾಅಂಗಡಿಯೊಂದನ್ನು ನಡೆಸುತ್ತಿದ್ದ ರಘು ಪೂಜಾರಿ (45) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ರಘು ಪೂಜಾರಿಯವರ ಸಹೋದರ ಶೀನ ಪೂಜಾರಿಯವರು ಅಸೌಖ್ಯದಿಂದ ಮರಣಹೊಂದಿದ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆಂದು ಬುಧವಾರವಷ್ಟೇ ಬೆಂಗಳುರಿನಿಂದ ಕುಟುಂಬ ಸಮೇತರಾಗಿ ಹೆಮ್ಮಾಡಿಯ ನಿವಾಸಕ್ಕೆ ಬಂದು ಇಲ್ಲಿ ಅಂತ್ಯಸಂಸ್ಕಾರವನ್ನು ಸಕಲ ವಿವಿಧಗಳೊಂದಿಗೆ ಪೂರೈಸಿದ್ದರಿ. ಬಳಿಕ ಗುರುವಾರ ಬೆಂಗಳುರಿಗೆ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ನೆಲಮಂಗಲ ಸಮೀಪ ನಡೆದಿದೆ. ಚಾಲಕ ನಿಯಂತ್ರಣ ತಪ್ಪಿಕಾರು ಪಲ್ಟಿಯಾದ ಅವಘಡದಲ್ಲಿ ಗಭೀರ ಗಾಯಗೊಂಡ ರಘು ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿದ್ದ ಇತರರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ.