ಮಂಗಳೂರು,ನ.18 : ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 56ನೆಯ ಕೇರಳ ಶಾಲಾ ಕಲೋತ್ಸವಕ್ಕೆ ಚಪ್ಪರ ಮುಹೂರ್ತ ಮಾಡಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾದ ಬಿಎಸ್ ಇಬ್ರಾಹಿಂ ಚಪ್ಪರ ನಿರ್ಮಾಣವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಹಾಗೂ ಪ್ರಧಾನ ಸಂಚಾಲಕ ಅನೀಸ್ ಜಿ ಮೂಸಾನ್, ಆಹಾರ ಸಮತಿ ಅಧ್ಯಕ್ಷ ಮೊಯ್ದೀನ್ ಕುಞ್ಞಿ ಪಳ್ಳತ್ತಡ್ಕ ಸ್ವಾಗತ ಸಮಿತಿ ಸಂಚಾಲಕಿ ಶಾಂತಮಣಿ, ಆರ್ಥಿಕ ಸಮಿತಿ ಸಂಚಾಲಕ ಚಂದ್ರಹಾಸನ್ ನಂಬಿಯಾರ್, ವೇದಿಕೆ ಸಮತಿ ಸಂಚಾಲಕ ದಿನೇಶ ಬೊಳುಂಬು, ವಸತಿ ಸಮತಿ ಸಂಚಾಲಕ ಪ್ರಶಾಂತ , ಕಾರ್ಯಕ್ರಮ ಸಮಿತಿ ಸಹಸಂಚಾಲಕ ಶ್ರೀಧರ ಡಿ ಮೊದಲಾದವರು ಉಪಸ್ಥಿತರಿದ್ದರು