ಮಂಗಳೂರು,ನ.17: 10ರಿಂದ 16 ವರ್ಷದೊಳಗಿನ ಬೆಳೆಯುತ್ತಿರುವ ಶೇಕಾಡ 2ರಿಂದ 4% ರಷ್ಟು ಮಕ್ಕಳಲ್ಲಿ ಸ್ಕೋಲಿಯೋಸಿಸ್ ತೊಂದರೆ ಸಾಮಾನ್ಯವಾಗಿ ಕಂಡು ಬರುತ್ತದೆ. ಇದು ಒಂದು ಬಹು ಜೀನ್ ಸ್ಥಿತಿಯಾಗಿದ್ದು, ಅನೇಕ ಪ್ರಕಟ ಲಕ್ಷಣಗಳನ್ನು ಹೊಂದಿರುತ್ತದೆ. ಬೆನ್ನು ಮೂಳೆಯು 10ಡಿಗ್ರಿ ಪಾರ್ಶ್ವ ವಕ್ರತೆ ಹೊಂದಿರುವುದನ್ನು ಸ್ಕೋಲಿಯೋಸಿಸ್ ಎಂದು ವ್ಯಾಖ್ಯಾನಿಸಬಹುದು.
ತೀವ್ರವಾದ ಬೆನ್ನು ನೋವು, ಕಾಲು ನೋವು, ಎಡ ಎದೆಗೂಡಿನ ತಿರುವು ಮತ್ತು ಅಸಹಜ ನರವೈಜ್ಞಾನಿಕ ತೊಂದರೆಗಳು ಈ ರೋಗದ ಮುಖ್ಯ ಲಕ್ಷಣಗಳು. ದೊಡ್ಡ ಪ್ರಮಾಣದ ಅಸ್ಥಿಪಂಜರದ ತಿರುವು (ವಕ್ರತೆ) ಹೊಂದಿರುವುದು ಮತ್ತು ಸ್ತ್ರಿ ಲಿಂಗದವರಾಗಿರುವುದು ಈ ವಕ್ರತಿಯ ಪ್ರಗತಿಗೆ ಕಾರಣವಾಗುವ ಮುಖ್ಯ ಅಪಾಯಕಾರಿ ಅಂಶಗಳು. ಹುಡುಗಿಯರಲ್ಲಿ ಸ್ಕೋಲಿಯೋಸಿಸ್ ಸಮಸ್ಯೆ ಸಾಮಾನ್ಯವಾಗಿ ಹುಡುಗರಿಗಿಂತ ಬೇಗ ಪ್ರಗತಿ ಹೊಂದುವುದರಿಂದ ಅವರಿಗೆ ಚಿಕಿತ್ಸೆಯ ಅಗತ್ಯ ಹೆಚ್ಚಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯ 13 ವರ್ಷ ಪ್ರಾಯದ ಗಂಗಮ್ಮಳದು ಸಾಮಾನ್ಯ ಜೀವನ. ಈಕೆಯ ಬೆನ್ನು ಕೊಂಚ ಬಾಗಿರುವುದುತಾಯಿಯ ಗಮನಕ್ಕೆ ಬಂತು ಮತ್ತು ಮುಂದಿನ ಒಂಬತ್ತು ತಿಂಗಳಲ್ಲಿ ಸ್ವೀಕಾರಾರ್ಹವಲ್ಲದ (ತೀವ್ರವಾದ) ವಿರೂಪತೆಯನ್ನು ಪಡೆಯಿತು. ಈ ತೊಂದರೆಯಿಂದಾಗಿ ಆಕೆಯ ಒಂದು ಭುಜವು ಇನ್ನೊಂದಕ್ಕಿಂತ ಎತ್ತರವಾಗಿಯೂ ಮತ್ತು ಆಕೆಯ ಎದೆಯು ಅಸಮಾನುಪಾತ ಸ್ಥಿತಿಯಲ್ಲಿತ್ತು. ಅವರು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ಮೂಳೆ ಶಸ್ತ್ರಚಿಕಿತ್ಸಾತಜ್ಞರಾದ ಡಾ. ಧೀರಾಜ್ಕುಮಾರ್ರನ್ನು ಸಂದರ್ಶಿಸಿದರು.
ಇವರು ಗಂಗಮ್ಮಳನ್ನು ಕೂಲಂಕುಶವಾಗಿ ಪರೀಕ್ಷಿಸಿ ಆಕೆಗೆ ಅಡಾಲಸೆಂಟ್ಇಡಿಯೋಪಥಿಕ್ ಸ್ಕೋಲಿಯೋಸಿಸ್ ತೊಂದರೆಯಿದ್ದು ಅದು ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವುದನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆಅಗತ್ಯವಿದೆಯೆಂದು ತಿಳಿಸಿದರು. ಡಾ. ಧೀರಜ್ಕುಮಾರ್ರವರ ನೇತೃತ್ವದಲ್ಲಿ ಡಾ. ಸುದರ್ಶನ್ ಭಂಡಾರಿ, ಡಾ. ಭಾಸ್ಕರ್ ಭಂಡಾರಿ, ಡಾ. ಮಿಥುನ್ ಶೆಟ್ಟಿಯವರನ್ನು ಒಳಗೊಂಡ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ವೈದ್ಯರ ಕೈಚಳಕದಿಂದಾಗಿ ಆಕೆಯು ಶಸ್ತ್ರಚಿಕಿತ್ಸೆ ನಡೆಸಿದ ನಂತರದ ಕೇವಲ 5 ದಿನದಲ್ಲೇ ತನ್ನ ದಿನನಿತ್ಯದ ಕೆಲಸಗಳನ್ನು ಮಾಡಲು ಪ್ರಾರಂಭಿಸಿದಳು.10ನೇ ದಿನದಂದು ಆಸ್ಪತ್ರೆಯಿಂದ ಮನೆಗೆ ತೆರಳಿ ತನ್ನ ದೈನಂದಿನ ಕೆಲಸ ಕಾರ್ಯಗಳೊಂದಿಗೆ ಶಾಲೆ ಮತ್ತು ಆಟೋಟಗಳಲ್ಲೂ ಭಾಗವಹಿಸುತ್ತಿದ್ದಾಳೆ.
ಸ್ಕೋಲಿಯೋಸಿಸ್ ಒಂದು ಗುಣ ಪಡಿಸಬಹುದಾದ ರೋಗವಾಗಿದ್ದು ಇದನ್ನುಆರಂಭದಲ್ಲಿ ಪತ್ತೆ ಹಚ್ಚಿದ್ದಲ್ಲಿ ಅತ್ಯಂತ ಸರಳ ವಿಧಾನದಿಂದ ಚಿಕಿತ್ಸೆ ನೀಡಿ ಸರಿಪಡಿಸಬಹುದು. ಸ್ಕೋಲಿಯೋಸಿಸ್ ಮಗುವಿನ ಸಾಮಾಜಿಕ ಚಟುವಟಿಕೆಗಳನ್ನು ತಡೆಗಟ್ಟುವುದಲ್ಲದೇ, ದೈನಂದಿನ ಚಟುವಟಿಕೆಗಳನ್ನೂ ಭಾದಿಸುತ್ತದೆ. ಆದುದರಿಂದ ಬೆನ್ನು ಮೂಳೆಗೆ ಸಂಭಂದಿಸಿದ ಯಾವುದೇ ವಿರೂಪತೆಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳವುದರಿಂದ ಮುಂದೆ ಬರುವಂತಹ ಅನೇಕ ಹೆಚ್ಚಿನ ಬೆನ್ನುಮೂಳೆಯ ತೊಂದರೆಗಳನ್ನು ಮತ್ತು ಚಿಕಿತ್ಸೆಗೆ ತಗಲುವ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಬಹುದು.
ಈ ಶಸ್ತ್ರಚಿಕಿತ್ಸೆಯ ಬಗ್ಗೆ ಹೆಚ್ಚಿನ ವಿವರಅಥವಾ ಮಾಹಿತಿಗಾಗಿಡಾ. ಧೀರಜ್ಕುಮಾರ್ರನ್ನು 9845777007ಕ್ಕೆ ಸಂಪರ್ಕಿಸಬಹುದು. ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರ ವೈದ್ಯಕೀಯ ನಿರ್ದೇಶಕರು ಡಾ. ಪ್ರಶಾಂತ್ ಮಾರ್ಲ ರವರು ತಿಳಿಸಿದ್ದಾರೆ.
