ಕನ್ನಡ ವಾರ್ತೆಗಳು

ಒಮನ್‌ನಲ್ಲಿ ವಾಹನ ಅಪಘಾತ: ಕಡಂಬಾರ್ ಯುವಕನೋರ್ವ ಮೃತ್ಯು.

Pinterest LinkedIn Tumblr

oman_boy_acdent

ಮಂಜೇಶ್ವರ, ಅ.10: ಗಲ್ಫ್ ರಾಷ್ಟ್ರ ಒಮನ್‌ನಲ್ಲಿ ವಾಹನ ಅಪಘಾತ ಕ್ಕೊಳಗಾದ ಮಂಜೇಶ್ವರ ಕಡಂಬಾರಿನ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಕಡಂಬಾರ್ ಅರಿಮಲೆ ನಿವಾಸಿ ಎ.ಎಸ್.ಅಬೂಬಕರ್ ಎಂಬ ವರ ಪುತ್ರ ನೌಫಲ್(22) ಮೃತಪಟ್ಟ ಯುವಕ.

ಸೆಪ್ಟಂಬರ್ 22ರಂದು ಒಮನ್‌ಗೆ ತೆರಳಿ ಕಾರು ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಗುರುವಾರ ರಾತ್ರಿ ತಾನು ಕರ್ತವ್ಯ ನಿರ್ವಹಿಸುವ ಕಂಪೆನಿಯಿಂದ ಕೆಲಸ ಮುಕ್ತಾಯಗೊಳಿಸಿ ಹಿಂದಿರು ಗಲು ರಸ್ತೆ ದಾಟುತ್ತಿದ್ದಂತೆ ಅತೀ ವೇಗ ದಲ್ಲಿ ಆಗಮಿಸಿದ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಗಂಭೀರ ಗಾಯಗೊಂಡ ನೌಫಲ್‌ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಕೊನೆ ಯುಸಿರೆಳೆದನು. ಮೃತದೇಹವನ್ನು ಊರಿಗೆ ತರುವ ಸಿದ್ಧತೆಗಳು ನಡೆಯುತ್ತಿವೆ. ಮೃತ ನೌಫಲ್ ತಂದೆ,ತಾಯಿ,ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾನೆ.

Write A Comment