ಕನ್ನಡ ವಾರ್ತೆಗಳು

ಮಣಿಪಾಲದಲ್ಲಿ ಗಾಂಜಾ ಡೀಲ್- ಪೊಲೀಸರಿಂದ ಇಬ್ಬರ ಬಂಧನ

Pinterest LinkedIn Tumblr

Manipal_Ganja_Arrest

(ಸಾಂದರ್ಭಿಕ ಚಿತ್ರ)

ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಡಿಸಿ‌ಐಬಿ ಪೊಲೀಸರು ಬಂಧಿಸಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಸಿಐಬಿ ಇನ್ಸ್‌ಪೆಕ್ಟರ್ ಟಿ.ಆರ್. ಜೈಶಂಕರ್ ಮತ್ತು ಸಿಬಂದಿ ಒಡಿಶಾ ಮೂಲದ ಸಾಗರ್ ಪೊಲೈ(19) ಮತ್ತು ರಬಿಕಿಶನ್(22)ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ಕೆ.ಜಿಗೂ ಅಧಿಕ ಗಾಂಜಾ, ನಗದು, ಮೊಬೈಲ್, ಪಾನ್‌ಕಾರ್ಡ್, ಪರ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವತ್ತುಗಳ ಒಟ್ಟು ಮೌಲ್ಯ 1,26,480/- ರೂಪಾಯಿ ಆಗಿರುತ್ತದೆ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment