ಉಡುಪಿ: ಅಂತರಾಷ್ಟ್ರೀಯ ಕ್ರೀಡಾಪಟು ಉತ್ತಮ ಓಟಗಾರ್ತಿ ಕುಂದಪುರದ ಕುವರಿ ಅಶ್ವಿನಿ ಅಕ್ಕುಂಜೆ ಈಗ ಎಂಗೇಜ್ ಆಗಿದ್ದಾರೆ. ಹೌದು ಸಾಫ್ಟ್ ವೇರ್ ಇಂಜಿನಿಯರ್ ಅಭಿಜಿತ್ ರೈ ಜೊತೆ ಉಡುಪಿಯ ಶಾರದಾ ಇಂಟರ್ ನ್ಯಾಶನಲ್ ಹೋಟೆಲಿನಲ್ಲಿ ಗುರುವಾರ ಇವರಿಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿಯೇ ನಡೆಯಿತು.
ಕುಂದಾಪುರದ ಸಿದ್ದಾಪುರ ಸಮೀಪದ ಅಕ್ಕುಂಜೆ ನಿವಾಸಿ ಬಿ.ಆರ್. ಚಿದಾನಂದ ಶೆಟ್ಟಿ ಹಾಗೂ ಯಶೋಧಾ ಶೆಟ್ಟಿ ಪುತ್ರಿಯಾಗಿರುವ ಅಶ್ವಿನಿ 2010ಕಾಮನ್ವೆಲ್ತ್ ರಿಲೇ, 2011ಏಷ್ಯಾಡ್ ನ ಹರ್ಡಲ್ಸ್ ಗೋಲ್ಡ್ ವಿನ್ನರ್ ಆಗಿರುವ ಇವರು ರಾಜ್ಯೋತ್ಸವ ಪ್ರಶಸ್ತಿಗೂ ಭಾಜನಾರಾಗಿದ್ದರು. ಅಭಿಜಿತ್ ರೈ ಮಂಗಳೂರಿನ ಬಲ್ಮಠ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
2016 ರಿಯೋ ಒಲಂಪಿಕ್ಸ್ ನಂತರ ವಿವಾಹವಾಗಲಿದೆ ಎನ್ನುವ ಬಗ್ಗೆಯೂ ಕುಟುಂಬ ಮೂಲಗಳು ತಿಳಿಸಿದ್ದು ವಿವಾಹ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಅಶ್ವಿನಿ ಅವರನ್ನು ಮದುವೆಯಾದ ಬಳಿಕವು ಅವರ ಇಚ್ಚೆಯಂತೆ ಕ್ರೀಡೆಗೆ ಪ್ರೋತ್ಸಾಹಿಸುತ್ತೇನೆ ಎಂದು ಅಭಿಜಿತ್ ರೈ ಭರವಸೆ ನೀಡಿದ್ದಾರೆ.