ಮಂಗಳೂರು,ಸೆ.08 : ಹೃನ್ಮನಗಳನ್ನು ಸಂತೃಪ್ತಿಗೊಳಿಸುವ ತೆನೆ ಹಬ್ಬವನ್ನು ಮಾತೆ ಮರಿಯಮ್ಮನವರ ಹುಟ್ಟುಹಬ್ಬವಾಗಿ ಆಚರಿಸುವ ಹಬ್ಬವೇ ‘ಮೊಂತಿ ಹಬ್ಬ’ ಈ ಹಬ್ಬವನ್ನು ಇಂದು ಕರಾವಳಿಯಾದ್ಯಂತ ಸಡಗರ- ಸಂಭ್ರಮದಿಂದ .ಚರ್ಚುಗಳಲ್ಲಿ ವಿಶೇಷಪೂಜೆ, ಪ್ರಾರ್ಥನೆಗಳೊಂದಿಗೆ ಕ್ರೈಸ್ತ ಬಾಂಧವರು ಆಚರಿಸುತ್ತಾರೆ.
ಕರಾವಳಿ ಭಾಗದಲ್ಲಿ ‘ತೆನೆ ಹಬ್ಬ’ ಅಥವಾ ‘ಮೊಂತಿ ಹಬ್ಬ’ವು ಕ್ರೈಸ್ತರಿಗೆ ಬಹುಪ್ರಿಯ. ಇದು ಒಂಬತ್ತು ದಿನಗಳ ಸಂಭ್ರಮದ ಹಬ್ಬ. ಹಬ್ಬಕ್ಕೆ ಮುನ್ನ ಒಂಬತ್ತು ದಿನಗಳ ಕಾಲ ಬಾಲಿಕಾ ಮಾತೆ ಮರಿಯಮ್ಮನವರಿಗೆ ನಿತ್ಯವೂ ಪುಷ್ಪವೃಷ್ಟಿಗೈದು ಸಮ್ಮಾನಿಸುವುದು ವಿಶೇಷ. ಚಿಕ್ಕ ಚಿಕ್ಕ ಮಕ್ಕಳೂ ಕೂಡಾ ಪುಟ್ಟ ಪುಟ್ಟ ಹೂಗಳ ಬುಟ್ಟಿಗಳನ್ನು ತಂದು ಬಾಲಿಕಾ ಮಾತೆ ಮರಿಯಮ್ಮನವರಿಗೆ ಅರ್ಪಿಸುವುದು ವಾಡಿಕೆ.
ದೇವಮಾತೆ ಮರಿಯಮ್ಮನವರಿಗೆ ನಮಿಸುವ ಈ ಹಬ್ಬದ ಸಂದಭರ್ದಲ್ಲಿ ಅನ್ನಾಹಾರ ನೀಡಿ ಪೋಷಿಸುವ ಪ್ರಕೃತಿಮಾತೆಗೆ ವಂದಿಸುವುದು ವಾಡಿಕೆ. ನಮ್ಮನ್ನೆಲ್ಲಾ ಸಾಕಿ ಸಲಹುವ ಪ್ರಕೃತಿಮಾತೆಯು ಮನುಷ್ಯನ ದಬ್ಬಾಳಿ ಕೆಗೆ ಒಳಗಾಗಿದ್ದಾಳೆ. ಇದರ ಪರಿಣಾಮ, ಅನಿಶ್ಚಿತ ುಳೆ, ವಾತಾವರಣದ ವೈಪರಿತ್ಯ, ಚಿತ್ರ ವಿಚಿತ್ರ ರೋಗರುಜಿನಗಳು, ಇನ್ನಿತರ ವಿಷಮತೆಗಳ ಮೂಲಕ ಕಂಡು ಬರುತ್ತಿದೆ. ಪೋಪ್ ಜಗದ್ಗುರು ಫ್ರಾನ್ಸಿಸರು ಇತ್ತೀಚೆಗೆ ನೀಡಿದ ಲೌದಾತೊ ಸೀ ಎಂಬ ಜಾಗತಿಕ ಪತ್ರದ ಮೂಲಕ ಭೂಮಾತೆಯನ್ನು, ಪರಿಸರವನ್ನು ಸಂರಕ್ಷಿಸುವ ಆದ್ಯಕರ್ತವ್ಯದ ಬಗ್ಗೆ ಮಾನವಕುಲವನ್ನು ಎಚ್ಚರಿಸಿದ್ದಾರೆ.
ಪ್ರತಿಯೊಬ್ಬರಿಗೂ ಆಶೀರ್ವದಿಸಿದ ಭತ್ತದ ತೆನೆಯನ್ನು ನೀಡಲಾಗುವುದು. ಇದು ಮೊದಲ ಫಸಲು. ಯಾವ ರೀತಿ ಮಾತೆ ಮರಿಯಮ್ಮನವರು ಯೇಸು ಕ್ರಿಸ್ತರ ವಿಮೋಚನೆಯ ಪ್ರಥಮ ಫಲವೋ, ಅದೇ ರೀತಿ ಪೃಕೃತಿಮಾತೆಯು ನೀಡಿದ ಮೊದಲ ಫಲವನ್ನು ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಕುಳಿತು ಸಾಮೂಹಿಕ ಭೋಜನ ಸೇವಿಸುವುದು ಇದರ ಸಂಕೇತವಾಗಿದೆ.