ಕನ್ನಡ ವಾರ್ತೆಗಳು

ಬೋಂಬೆ ಬಂಟ್ಸ್‌ಅಸೋಸಿಯೇಶನ್‌ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ.

Pinterest LinkedIn Tumblr

mumbi_iswr_photo_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬೋಂಬೆ ಬಂಟ್ಸ್‌ಅಸೋಸಿಯೇಶನ್‌ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಆ. 26ರಂದು ಸಯನ್‌ನ ನಿತ್ಯಾನಂದ ಸಭಾಗೃಹದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೋಂಬೆ ಬಂಟ್ಸ್‌ಅಸೋಸಿಯೇಶನ್‌ ಅಧ್ಯಕ್ಷ ಶ್ಯಾಮ್‌ಎನ್‌. ಶೆಟ್ಟಿ ಮಾತನಾಡಿತ್ತಾ, ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾ ಇರಲಿ ಎಂದರು.

mumbi_iswr_photo_3 mumbi_iswr_photo_2

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಳಾ ಶೆಟ್ಟಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಇದೇ ರೀತಿ ಮುಂದುವರಿಯಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಸರಿತಾ ಚಂದ್ರಶೇಖರ್‌ಶೆಟ್ಟಿ, ಅತಿಥಿ ವಿನೋದಾ ಜೆ. ಶೆಟ್ಟಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಚಂದ್ರಶೇಖರ್‌ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಸುರೇಂದ್ರ ಶೆಟ್ಟಿ ಮಾತನಾಡಿ, ಸಮಾರಂಭದಲ್ಲಿ ಪಾಲ್ಗೊಂಡ ಮಹಿಳೆಯರು ಬಂಟರ ಸಂಸ್ಕೃತಿಯನ್ನು ಬಿಂಬಿಸುವ ಬಗ್ಗೆ ಅಭಿಮಾನದ ವ್ಯಕ್ತಪಡಿಸಿದರು.

ಶಾರದಾ ಶ್ಯಾಮ ಶೆಟ್ಟಿ, ಲತಾ ಪಿ. ಶೆಟ್ಟಿ, ಲತಾ ಜೆ. ಶೆಟ್ಟಿ, ಚಿತ್ರಾ ಶೆಟ್ಟಿ, ಆಶಾ ಶಿವರಾಮ ಶೆಟ್ಟಿ, ಗುಣವತಿ ಶೆಟ್ಟಿ, ದಯಾಮಣಿ ಶೆಟ್ಟಿ, ಸುಚಿತ್ರಾ ಶೆಟ್ಟಿ, ರತ್ನಾಕರ ಶೆಟ್ಟಿ, ಉಪಾಧ್ಯಕ್ಷ ವಿಠಲ ರೈ, ಪ್ರಭಾಕರ ಶೆಟ್ಟಿ, ಆನಂದ ವಿ. ಶೆಟ್ಟಿ, ಬಾಲಣ್ಣ ಶೆಟ್ಟಿ ಉಪಸ್ಥಿತರಿದ್ದರು.

Write A Comment