ಕನ್ನಡ ವಾರ್ತೆಗಳು

ಕಾಸರಗೋಡು : ಬಸ್ – ಕಾರ್ ಬೀಕರ ಅಪಘಾತ – ದಂಪತಿ ಬಲಿ – 18ಕ್ಕೂ ಅಧಿಕ ಮಂದಿಗೆ ಗಾಯ

Pinterest LinkedIn Tumblr

Car_Bus_accident_2

ಕಾಸರಗೋಡು, ಆ.24: ರಸ್ತೆ ಅಪಘಾತವೊಂದರಲ್ಲಿ ದಂಪತಿ ಮೃತಪಟ್ಟು 18ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರವಿವಾರ ಸಂಜೆ ಕಾಞಂಗಾಡ್ ಸಮೀಪದ ಮಾವುಂಗಾಲ್ನಲ್ಲಿ ನಡೆದಿದೆ. ಪಾನತ್ತೂರಿನಿಂದ ಕಾಞಂಗಾಡ್‌ಗೆ ಬರುತ್ತಿದ್ದ ಬಸ್ ಮತ್ತು ಸುರೇಶ್ ಬಾಬು ಚಲಾಯಿಸುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.ಸುರೇಶ್ ಬಾಬು ಕುಟುಂಬ ಕಾಞಂಗಾಡ್‌ನಿಂದ ವೆಳ್ಳರಿಕುಂಡುವಿಗೆ ತೆರಳುತ್ತಿತ್ತು.

ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ವೆಳ್ಳರಿಕುಂಡುವಿನ ಸುರೇಶ್ ಬಾಬು(39) ಮತ್ತು ಅವರ ಪತ್ನಿ ಸುಧಾಮಣಿ (35) ಎಂದು ಹೆಸರಿಸಲಾಗಿದೆ. ಇವರ ಪುತ್ರ ಗೋಪಿನಾಥ್(12) ಗಂಭೀರ ಗಾಯಗೊಂಡಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಬಸ್ಸಿನಲ್ಲಿದ್ದ 17 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

Car_Bus_accident_1

ಬಸ್ ಚಾಲಕ ರವಿ, ಪ್ರಯಾಣಿಕರಾದ ಕುಂಬಳೆಯ ಅಬ್ದುಲ್ ಹಮೀದ್, ಪ್ರೀತಿ, ಬೀನಾ ಜೇಮ್ಸ್, ಉದಯ, ಅಶೋಕ, ಬೇಬಿ, ರಾಧಿಕಾ, ರಜನಿ, ಶಾಜಿ ಸೇರಿದಂತೆ 17 ಮಂದಿ ಗಾಯಗೊಂಡಿದ್ದಾರೆ. ಇವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ಬಸ್ ಚಾಲಕ ರವಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಸುರೇಶ್ ಬಾಬು ಬಿಎಸ್‌ಎಫ್ ಯೋಧನಾಗಿದ್ದು, ಕೆಲ ಸಮಯದ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಸುಧಾಮಣಿ ಖಾಸಗಿ ಬ್ಯಾಂಕ್‌ವೊಂದರ ಕಸ್ಟಮರ್ ಸರ್ವಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಘಟನೆಯ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment