ಕನ್ನಡ ವಾರ್ತೆಗಳು

ಮಣಿಪಾಲದಲ್ಲಿ ಲಾಕಪ್‌ಡೆತ್: ವಿಚಾರಣಾಧೀನ ಆರೋಪಿ ಠಾಣೆ ಸೆಲ್‌ನಲ್ಲಿಯೇ ನೇಣಿಗೆ ಶರಣು; ಸ್ಥಳಕ್ಕೆ ಐಜಿಪಿ ಭೇಟಿ

Pinterest LinkedIn Tumblr

ಉಡುಪಿ : ವಿಚಾರಣಾಧೀನ ಆರೋಪಿಯೊಬ್ಬ ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

ಉತ್ತರ ಪ್ರದೇಶ ಮೂಲದ ಗಯಾಪ್ರಸಾದ್‌ (20) ಆತ್ಮಹತ್ಯೆ ಮಾಡಿಕೊಂಡಿರುವ  ಆರೋಪಿಯಾಗಿದ್ದು ಆ. 3 ರಂದು ಈತನ ಪತ್ನಿ ರೋಶನಿ (18) ಕೆಲಸ ನಿರ್ವಹಿಸುತ್ತಿದ್ದ ಪರ್ಕಳ ದೇವಿನಗರದ ಕಾರ್ಖಾನೆಯ ಬಿಡಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಹೋದರಿ ಸಾವಿಗೆ ಗಯಾಪ್ರಸಾದ್ ಕಾರಣ ಎಂದು  ಆಕೆಯ ಸಹೋದರ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು.

Manipal_Laockup_Death (1)

 Manipal_Laockup_Death (3)

(ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮ್ರತಪಾಲ್ ಬೇಟಿ )

Manipal_Laockup_Death (4)

Manipal_Laockup_Death Manipal_Laockup_Death (2)

ರಾತ್ರಿ ಠಾಣೆಯ ಸೆಲ್‌ನಲ್ಲಿದ್ದ ಈತ ನನಗೆ ವಿಪರೀತ ಚಳಿಯಾಗುತ್ತಿದೆ ಎಂದು ಪೊಲೀಸರಿಂದ ಬೇಡ್‌ ಶೀಟ್‌ ಪಡೆದು ಅದರಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮ್ರತಪಾಲ್ ಬೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment