ಮಂಗಳೂರು: ಬರ್ಕೆ ಪೊಲೀಸರು ಗುರುವಾರ ಮುಂಜಾನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕಸಾಯಿಖಾನೆಗೆ ಸೇರಬೇಕಾದ 16 ದನಗಳು ಪೊಲೀಸರ ವಶವಾಗಿದೆ.
ಇಂದು ಮುಂಜಾನೆ ನಗರದ ಮಣ್ಣಗುಡ್ಡ – ಬರ್ಕೆಯ ದುರ್ಗಾಮಹಲ್ ಜಂಕ್ಷನ್ ಬಳಿ ಖಚಿತ ಮಾಹಿತಿ ಮೇರೆಗೆ ಬರ್ಕೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಜಾನುವಾರು ಸಾಗಿಸುತಿದ್ದ ವಾಹನವನ್ನು ವಶಪಡಿಸಿಕೊಂಡ್ಡಿದ್ದಾರೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೧೬ ದನಗಳಿದ್ದು, ವಾಹನದಲ್ಲಿದ್ದ ಜಾನುವಾರುಗಳು ಅತ್ಯಂತ ದಯಾನೀಯ ಸ್ಥಿತಿಯಲ್ಲಿದ್ದವು ಎನ್ನಲಾಗಿದೆ. ಇವುಗಳಲ್ಲಿ ಕೆಲವು ದನಗಳ ಕಾಲಿಗೆ ಏಟುಗಳಾಗಿದ್ದವು ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಿಯರ ನೆರವಿನಿಂದ ಜಾನುವಾರುಗಳನ್ನು ಠಾಣೆಯಿಂದ ಬೇರೇಡೆಗೆ ಸಾಗಿಸಿದ್ದಾರೆ. ಪ್ರಕರಣದ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಕ್ರಮ ಕೈಗೊಳುತ್ತಿಲ್ಲ : ವಿಎಚ್ಪಿ ಆರೋಪ
ನಿನ್ನೆ ತಾನೇ ಹಿಂದೂ ಸಂಘಟನೆಗಳ ಮುಖಂಡರು ಎಂ.ಬಿ.ಪುರಾಣಿಕ ಅವರ ನೇತ್ರತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಜಾನುವಾರು ಸಾಗಾಟ ತಡೆಗೆ ಪೊಲೀಸರು ಕ್ರಮ ಕೈಗೊಳುತ್ತಿಲ್ಲವೆಂದು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸ ಬಹುದು.