ಕನ್ನಡ ವಾರ್ತೆಗಳು

ಸಿಟಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನ ಸಾವು

Pinterest LinkedIn Tumblr

katipalla_acdent_photo

ಮಂಗಳೂರು, ಜುಲೈ.07 : ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಿನ್ನೆ ರಾತ್ರಿ ಖಾಸಗಿ ಸಿಟಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾರುಣ ಸಾವನ್ನಪ್ಪಿದ್ದಾನೆ.

katipalla_acdent_photo_2 katipalla_acdent_photo_1

ಅಗರಮೇಲು ನಿವಾಸಿ ಮಾಧವ ಎನ್ನುವವರ ಪುತ್ರ ರಂಜಿತ್ (25) ಮೃತ ದುರ್ದೈವಿಯಾಗಿದ್ದು, ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದರು. ನಿನ್ನೆ ರಾತ್ರಿ ಮನೆಯಿಂದ ಬೈಕಿನಲ್ಲಿ ಹೊರಟು ಕೃಷ್ಣಾಪುರ ಮಾರ್ಗವಾಗಿ ಕಾಟಿಪಳ್ಳದ ಸ್ನೇಹಿತನನ್ನು ಭೇಟಿಯಾಗಲು ತೆರಳುತ್ತಿದ್ದರು. ಕಾಟಿಪಳ್ಳದ ಶಂಸುದ್ದೀನ್ ವೃತ್ತದ ಬಳಿಗೆ ತಲುಪಿದಾಗ ಗಣೇಶ ಪುರದಿಂದ ಸುರತ್ಕಲ್ ನತ್ತ ಬರುತ್ತಿದ್ದ ಸಿಟಿ ಬಸ್ ಬೈಕಿಗೆ ಅಪ್ಪಳಿಸಿದೆ. ಪರಿಣಾಮ ಬೈಕ್ ಸಹಿತ ರಸ್ತೆಗೆಸೆಯಲ್ಪಟ್ಟ ರಂಜಿತ್ ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Write A Comment