ಕುಂದಾಪುರ: ಖಾಸಗಿ ಬಸ್ಸು ಚಾಲಕನ ಅಜಾಗರುಕತೆ ಮತ್ತು ಅತೀ ವೇಗದಿಂದಾಗಿ ಬಸ್ಸನ್ನು ಏರಲು ಹೋದ ವ್ಯಕ್ತಿಯೋರ್ವ ಬಸ್ಸಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಮ್ರತಪಟ್ಟ ಘಟನೆ ಸೋಮವಾರ ಸಂಜೆ ಕುಂದಾಪುರದ ಶಾಸ್ತ್ರೀ ವ್ರತ್ತದ ಸಮೀಪ ನಡೆದಿದೆ.
ಕೋಟ ಸಮೀಪದ ನಿವಾಸಿ ಲಕ್ಷ್ಮಣ ದೇವಾಡಿಗ (52) ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದವರು.
ಗಾರೆ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣ ಅವರು ಸೋಮವಾರ ಸಂಜೆ ವೇಳೆ ಕೆಲಸ ಮುಗಿಸಿ ಬಸ್ಸು ಏರಿ ಮನೆಗೆ ಹೊರಡುವ ಸಮಯದಲ್ಲಿ ಬಸ್ಸು ಚಾಲಕ ಏಕಾಏಕಿಯಾಗಿ ಬಸ್ಸು ಚಲಾಯಿಸಿದ ಕಾರಣ ನಿಯಂತ್ರ್ನ ತಪ್ಪಿ ಬಸ್ಸಿನ ಡೋರಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಕಾಂಕ್ರಿಟ್ ರಸ್ತೆ ಮೇಲೆ ಬಿದ್ದ ಪರಿಣಾಮ ತಲೆಗೆ ಹಗೂ ಕಾಲು ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ತಕ್ಷಣ ಅವರನ್ನು ಕುಂದಾಪುರ ಖಾಸಗೊಇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
1 Comment
Yakri kundhapura drivar’s ge buddhi illa?.anthavarannu yakri agency kelasackittu kondidhe?