ಉಡುಪಿ: ಇಲ್ಲಿನ ಹೆಬ್ರಿ ಠಾಣಾ ವ್ಯಾಪ್ತಿಯ ಜೋಮ್ಲುತೀರ್ಥಕ್ಕೆ ತೆರಳಿದ ಯುವಕರ ತಂಡದಲ್ಲಿದ್ದವರ ಪೈಕಿ ನೀರಿಗಿಳಿದ ಯುವಕನೋರ್ವ ನೀರಿನ ರಭಸಕ್ಕೆ ಸಿಕ್ಕು ಕೊಚ್ಚಿಹೋದ ಘಟನೆ ಭಾನುವಾರ ಸಂಜೆ ನಡೆದಿದೆ.
ಕುಂದಾಪುರದ ನಿವಾಸಿ ನವೀನ್ ಖಾರ್ವಿ (26) ಎಂಬಾತನೇ ನೀರಿನಲ್ಲಿ ಕೊಚ್ಚಿಹೋದಾತ.
ಕುಂದಾಪುರದ ಅರವಿಂದ ಮೋಟಾರ್ಸ್ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್ ಇತರೇ ನಾಲ್ಕೈದು ಮಂದಿ ಯುವಕರೊಂದಿಗೆ ಹೆಬ್ರಿ ಸಮೀಪದ ಜೋಮ್ಲುತೀರ್ಥ ಫಾಲ್ಸಿಗೆ ವಿಹಾರಕ್ಕಾಗಿ ತೆರಳಿದ್ದರು ಎನ್ನಲಾಗಿದೆ. ಆದರೇ ಇದೇ ವೇಳೆ ನೀರಿಗಿಳಿದ ನವೀನ್ ನೀರಿನ ಸೆಳೆತಕೆ ಸಿಕ್ಕು ಕೊಚ್ಚಿಹೋಗಿದ್ದು ಇನ್ನೂ ಆತನ ಪತ್ತೆಯಾಗಿಲ್ಲ.
ಅಡ್ಡಿಯಾದ ಮಳೆ: ಆತನ ಹುಡುಕಾಟ ಕಾರ್ಯ ಭಾನುವಾರ ಸಂಜೆಯಿಂದಲೇ ಭರದಿಂದ ಸಾಗಿದ್ದು, ಸುರಿಯುತ್ತಿದ್ದ ಮಳೆಯ ಕಾರಣ ಈ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಇನ್ನೂ ಸಿಗದ ನವೀನ್: ನೀರಿನಲ್ಲಿ ಕೊಚ್ಚಿಹೋದ ನವೀನ್ ಬಗ್ಗೆ ಈವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಸೋಮವಾರ ಬೆಳಿಗ್ಗೆನಿಂದಲೂ ಕಾರ್ಯಾಚರಣೆ ಆರಂಭವಾಗಿದ್ದು. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.