ಉಳ್ಳಾಲ ಜೂ,03 : ಸುನ್ನೀ ವಿಧ್ಯಾರ್ಥಿ ಸಂಘ ಅಳೇಕಲ ಉಳ್ಳಾಲ ವತಿಯಿಂದ 7 ನೇ ವಾರ್ಷಿಕ ಅಜ್ಮೀರ್ ಮೌಲಿದ್ ಮಜ್ಲಿಸ್ಕಾರ್ಯಕ್ರಮವು ಇತ್ತಿಚೆಗೆ ಅಲ್ ಮಸ್ಜಿದುಲ್ ಜಾಮಿಯ ಅಲ್-ಅಮೀನ್ ಅಳೇಕಲ ಮಸೀದಿಯಲ್ಲಿ ನಡೆಯಿತ್ತು. ಎಂ.ಸಿ. ಮುಹಮ್ಮದ್ ಫೈಝಿ ಅಜ್ಮೀರ್ ಶೈಖ್ (ಖ.ಸಿ) ರವರ ಜೀವನ ಚರಿತ್ರೆ ಹಾಗೂ ಬರಾಅತ್ ರಾತ್ರಿಯ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಅಳೇಕಲ ಮಸೀದಿಯ ಅಧ್ಯಕ್ಷ ಯು.ಎ.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದರು. ಈ ಕಾರ್ಯಕ್ರಮದಲ್ಲಿ ಅಳೇಕಲ ಮಸೀದಿಯ ಖತೀಬ್ ಅಲ್ ಹಾಜ್ ಅಬೂ ಝಿಯಾದ್ ಮದನಿ ಪಟ್ಟಾಂಬಿ, ಎಸ್ವೈಎಸ್ ಅಳೇಕಲ ಶಾಖೆ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಙಳ್, ಎಸ್ವಿಎಸ್. ಅಳೇಕಲ ಅಧ್ಯಕ್ಷ ಸಿ.ಎಂ .ಅಶ್ರಫ್, ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಅಧ್ಯಕ್ಷ ಸಂಶುದ್ದೀನ್ ಜಝೀರ್, ಅಬ್ದುಲ್ ರವೂಫ್ ಲತೀಫಿ, ಅಬ್ದುಲ್ ಲತೀಫ್ ಮದನಿ, ಝಕರಿಯಾ ಅಹ್ಸನಿ, ಅಳೇಕಲ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರವೂಫ್ ಹಾಜಿ, ಎಸ್ವಿಎಸ್ ಉಪಾಧ್ಯಕ್ಷರಾದ ಫಾಝಿಲ್ ಅಳೇಕಲ, ಅನ್ಸಾರ್ ಅಳೇಕಲ, ಎಸ್ವಿಎಸ್ ಕೋಶಾಧಿಕಾರಿ ಬಶೀರ್ ಅಳೇಕಲ, ಜಾಫರ್ ಯು.ಎಸ್ ಮುಂತಾದವರು ಉಪಸ್ಥಿತರಿದ್ದರು.