ಕನ್ನಡ ವಾರ್ತೆಗಳು

ತಾಲೂಕಿನೆಲ್ಲೆಡೆ ವರುಣನ ಅಬ್ಬರ; ಸಿಡಿಲಿನ ಆರ್ಭಟ | ಸಿಡಿಲು ಬಡಿದು ಬಾಲಕ ಗಂಭೀರ

Pinterest LinkedIn Tumblr
heavy_Rain_Lightning_2
ಕುಂದಾಪುರ:ತಾಲೂಕಿನಾದ್ಯಂತ ಶುಕ್ರವಾರ ಮಧ್ಯಾಹನದ ಬಳಿಕ ಸಿಡಿಲು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಸತತ ೨-೩ ಗಂಟೆಗಳ ಕಾಲ ಸುರಿದ ಬಾರೀ ಮಳೆಯಿಂದಾಗಿ ಜನಜೀವನ  ಅಸ್ಥವ್ಯಸ್ಥಗೊಂಡಿತ್ತು. ರಸ್ತೆಯ ಸಮೀಪ ಕ್ರತಕ ನೆರೆ ಸ್ರಷ್ಟಿಯಾಗಿ ವಾಹನ ಸವರಾರು ಪರದಾಡುವಂತಾಗಿತ್ತು.
Rain_Prblrm_Kndpr Rain_Prblrm_Kndpr (1) Rain_Prblrm_Kndpr (2) Rain_Prblrm_Kndpr (3)
ಸಿಡಿಲಿನ ಅಬ್ಬರ:  ಕೊಲ್ಲೂರು ಸಮೀಪದ ಕೆಂಚನೂರು ಗ್ರಾಮದ ಜಾಡಿಯಲ್ಲಿ ಶುಕ್ರವಾರ  ಸಿಡಿಲು ಬಡಿದು ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಜಾಡಿಯಲ್ಲಿ ದಿನಸಿ ಅಂಗಡಿ ಹೊಂದಿರುವ ಪ್ರಭಾಕರ ಶೆಟ್ಟಿ ಅವರ ಪುತ್ರ ನಿತೇಶ್‌ (16) ಸಿಡಿಲು ಬಡಿದು ಗಾಯಗೊಂಡಾತ. ಗಾಯಗೊಂಡ ನಿತೇಶನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಅಲ್ಲದೇ ಸಿಡಿಲಾಘಾತಕ್ಕೆ ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ಅಂಗಡಿ ಹಾಗೂ ಎರಡು ಮನೆಗಳ ವಿದ್ಯುತ್‌ ಸಂಪರ್ಕಕ್ಕೆ ಅಪಾರ ಹಾನಿಯಾಗಿದೆ. ಸ್ಥಳೀಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎನ್ನುವವರ ಮನೆಗೂ ಸಿಡಿಲು ಬಡಿದು ಹಾನಿಯಾದ ಬಗ್ಗೆ ವರದಿಯಾಗಿದೆ.

 

Write A Comment